ಸುದ್ದಿಒನ್, ಚಿತ್ರದುರ್ಗ, ಜೂನ್. 16 : ನಾಳೆ ಬೆಳಗ್ಗೆ 11 ಗಂಟೆಗೆ ಪಿಳ್ಳೇಕೇರನಹಳ್ಳಿ ಯ ಬಾಪೂಜಿ ಶಾಲೆಯಲ್ಲಿ ಕೆ.ನಿರ್ಮಲ ಮರಡಿಹಳ್ಳಿ ಯವರು ರಚಿಸದ ಬೆಳ್ಳಕ್ಕಿ ಸಾಲು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.
ಇತಿಹಾಸ ತಜ್ಞ ಡಾ.ಬಿ.ರಾಜಶೇಖರಪ್ಪ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಂ.ವೀರೇಶ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಇಒ ನಾಗಭೂಷಣ, ಲೇಖಕಿ ಕೆ.ನಿರ್ಮಲ ಮರಡಿಹಳ್ಳಿ ಮತ್ತು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಭಾಗವಹಿಸಲಿದ್ದಾರೆ.






