ಬೆಂಗಳೂರು; ದೇಶದಲ್ಲಿ ಮತ್ತೆ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ರಾಜ್ಯದಲ್ಲೂ ದಿನೇ ದಿನೇ ಕೇಸ್ ಗಳು ದಾಖಲಾಗುತ್ತಿವೆ. ಸದ್ಯ ಕರ್ನಾಟಕ ರಾಜ್ಯದಲ್ಲಿ 47 ಕೇಸ್ ಗಳು ದಾಖಲಾಗಿವೆ. 47 ಕೇಸಲ್ಲಿ 46 ಜನ ಹೋಮ್ ಐಸೋಲೇಷನ್ ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆ ಟೆಸ್ಟ್ ಗಳನ್ನ ಮಾಡ್ತಾ ಇದೆ. ಒಂದೇ ದಿನಕ್ಕೆ 104 ಟೆಸ್ಟ್ ಗಳನ್ನ ಮಾಡಿದೆ. ಹೀಗೆ ಮಾಡಿದ ಟೆಸ್ಟ್ ಬಳಿಕ 9 ಜನರಿಗೆ ಪಾಸಿಟಿವ್ ಇರುವುದು ತಿಳಿದು ಬಂದಿದೆ.
ಸಿಲಿಕಾನ್ ಸಿಟಿ ಒಂದರಲ್ಲಿಯೇ ಕೇಸ್ ಹೆಚ್ಚಳವಾಗುತ್ತಿರುವ ಕಾರಣ, ಹೈಅಲರ್ಟ್ ಆಗಿದ್ದಾರೆ. ಬಿಬಿಎಂಪಿ ಟೆಸ್ಟಿಂಗ್ ಹೆಚ್ಚು ಮಾಡಿದೆ. ಇಂದು ಬಿಬಿಎಂಪಿಯಲ್ಲಿ ಮಹತ್ವದ ಸಭೆ ನಡೆಸಿ, ಬಳಿಕ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಆರೋಗ್ಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ವೈರಸ್ ಕಡಿಮೆ ಮಾಡುವುದಕ್ಕೆ ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈಗಾಗಲೇ ಕೊರೊನಾ ವಾರಿಯರ್ಸ್ ಕೂಡ ರೆಡಿಯಾಗಿದ್ದಾರೆ.
ಈ ಕೊರೊನಾ ಬಹಳ ವೇಗವಾಗಿ ರೋಗ ನಿರೋಧ ಶಕ್ರಿ ಇರುವವರಿಗೆ ಹರಡುತ್ತದೆ. ಅದರಲ್ಲೂ ಗರ್ಭಿಣಿಯರು, ವೃದ್ಧರು, ಮಕ್ಕಳು ಬಹಳ ಕಟ್ಟೆಚ್ಚರದಿಂದ ಇರಬೇಕಾಗಿದೆ. ಅದರಲ್ಲೂ ಎರಡು ಅಲೆಯಲ್ಲೂ ಪಾಸಿಟಿವ್ ರೇಟ್ ಹೆಚ್ಚಾಗಿತ್ತು. ಸಾವು – ನೋವುಗಳು ದಾಖಲಾಗಿತ್ತು. ಈಗ ಮತ್ತೆ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಜನ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಂಡು, ಸ್ಯಾನಿಟೈಸರ್ ಬಳಸುವುದು, ಬಿಸಿ ನೀರನ್ನ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾ್ ತಿನ್ನುವುದು ಉತ್ತಮ.


