Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ; ಎಷ್ಟಿದೆ ಇಂದಿನ ಅಡಿಕೆ ರೇಟ್..?

---Advertisement---

ಬೆಂಗಳೂರು; ಅಡಿಕೆ ಬೆಳೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಅಡಿಕೆ ಬೆಳೆದ ರೈತನಿಗೆ ಸಂತಸವನ್ನು ತಂದಿದೆ. ಯಾಕಂದ್ರೆ ಅಡಿಕೆ ಬೆಳೆಯನ್ನು ಕಾಪಾಡಿಕೊಳ್ಳುವುದೇ ಬಹಳ ಸಾಹಸದ ಕೆಲಸವಾಗಿದೆ. ಹೀಗಿರುವಾಗ ಬಂದ ಬೆಳೆಗೆ ಉತ್ತಮ ಲಾಭ ಸಿಕ್ಕರೆ ನೆಮ್ಮದಿ ಅಲ್ಲವಾ..? ಇದೀಗ ಅಡಿಕೆಯ ಬೆಲೆಯಲ್ಲೂ ಅಷ್ಟು ದಿನೇ ದಿನೇ ಏರಿಕೆಯಾಗುತ್ತಾ ಇದೆ. ಇಂದಿನ ದರವನ್ನು ನೋಡುವುದಾದರೆ, ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 56,100 ರೂಪಾಯಿ ಆಗಿದೆ.

ಇನ್ನು ಚನ್ನಗಿರಿಯ ರಾಶಿ ಅಡಿಕೆ ಧಾರಣೆ ನೋಡುವುದಾದರೆ ಗರಿಷ್ಠ ದರ 56,100 ರೂಪಾಯಿಗೆ ಹೋಗಿದೆ. ಕನಿಷ್ಠ ದರವನ್ನು ನೋಡುವುದಾದರೆ 52,512 ರೂಪಾಯಿ ಇದ್ದು, ಸರಾಸರಿ ಬೆಲೆ 55,333 ರೂಪಾಯಿ ಇದೆ. ಬೆಟ್ಟೆ ಅಡಿಕೆ ದರ 25,786 ರೂಪಾಯಿ ಇದ್ದು, ಕನಿಷ್ಠ ದರ 18,187 ರೂಪಾಯಿ ಇದೆ. ಸರಾದರಿ ದರ 22,722 ರೂಪಾಯಿ ಇದೆ. ಇದರಿಂದ ಅಡಿಕೆ ಬೆಳೆದ ರೈತ ಬಹಳ ಖುಷಿಯಾಗಿದ್ದಾನೆ.

ಅದರಲ್ಲೂ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಆಗಿತ್ತು. ಬಳಿಕ 53,000 ರೂಪಾಯಿ ಆಯ್ತು. ಅಂದಿನಿಂದಲೂ ಅಡಿಕೆ ತನ್ನ ಬೆಲೆಯನ್ನು ಏರಿಕೆ ಮಾಡಿಕೊಳ್ಳುತ್ತಲೆ ಬರುತ್ತಿದೆ. ಇದೀಗ 56,000 ಗಡಿ ದಾಟಿದೆ. ಇನ್ನು ಕೆಲವೇ ದಿನಗಳಲ್ಲಿ 60,000 ಮುಟ್ಟುವ ನಿರೀಕ್ಷೆಯೂ ಇದೆ. ಚನ್ನಗಿರಿಯನ್ನು ಅಡಿಕೆ ನಾಡು ಎಂದೇ ಕರೆಯುತ್ತಾರೆ. ಇಳಿಕೆಯಾಗಿದ್ದ ಅಡಿಕೆ ದರ ಇದೀಗ ಏರಿಕೆಯತ್ತ ಸಾಗುತ್ತಿರುವುದು ರೈತರಿಗೆ ಖುಷಿ ನೀಡಿದೆ. ಹೀಗೆ ಬೆಲೆ ಏರಿಕೆಯತ್ತಲೆ ಸಾಗಲಿ ಎಂದೇ ರೈತರು ಬೇಡಿಕೊಳ್ಳುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಅಡಿಕೆ ಮರಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿರುತ್ತದೆ. ಅಷ್ಟು ಕಷ್ಟಪಟ್ಟಿದ್ದಕ್ಕೂ ಕೊಂಚ ನೆಮ್ಮದಿಯೇ ಸರಿ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...