Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ; ಎಷ್ಟಿದೆ ಇಂದಿನ ಅಡಿಕೆ ರೇಟ್..?

---Advertisement---

ಬೆಂಗಳೂರು; ಅಡಿಕೆ ಬೆಳೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಅಡಿಕೆ ಬೆಳೆದ ರೈತನಿಗೆ ಸಂತಸವನ್ನು ತಂದಿದೆ. ಯಾಕಂದ್ರೆ ಅಡಿಕೆ ಬೆಳೆಯನ್ನು ಕಾಪಾಡಿಕೊಳ್ಳುವುದೇ ಬಹಳ ಸಾಹಸದ ಕೆಲಸವಾಗಿದೆ. ಹೀಗಿರುವಾಗ ಬಂದ ಬೆಳೆಗೆ ಉತ್ತಮ ಲಾಭ ಸಿಕ್ಕರೆ ನೆಮ್ಮದಿ ಅಲ್ಲವಾ..? ಇದೀಗ ಅಡಿಕೆಯ ಬೆಲೆಯಲ್ಲೂ ಅಷ್ಟು ದಿನೇ ದಿನೇ ಏರಿಕೆಯಾಗುತ್ತಾ ಇದೆ. ಇಂದಿನ ದರವನ್ನು ನೋಡುವುದಾದರೆ, ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 56,100 ರೂಪಾಯಿ ಆಗಿದೆ.

ಇನ್ನು ಚನ್ನಗಿರಿಯ ರಾಶಿ ಅಡಿಕೆ ಧಾರಣೆ ನೋಡುವುದಾದರೆ ಗರಿಷ್ಠ ದರ 56,100 ರೂಪಾಯಿಗೆ ಹೋಗಿದೆ. ಕನಿಷ್ಠ ದರವನ್ನು ನೋಡುವುದಾದರೆ 52,512 ರೂಪಾಯಿ ಇದ್ದು, ಸರಾಸರಿ ಬೆಲೆ 55,333 ರೂಪಾಯಿ ಇದೆ. ಬೆಟ್ಟೆ ಅಡಿಕೆ ದರ 25,786 ರೂಪಾಯಿ ಇದ್ದು, ಕನಿಷ್ಠ ದರ 18,187 ರೂಪಾಯಿ ಇದೆ. ಸರಾದರಿ ದರ 22,722 ರೂಪಾಯಿ ಇದೆ. ಇದರಿಂದ ಅಡಿಕೆ ಬೆಳೆದ ರೈತ ಬಹಳ ಖುಷಿಯಾಗಿದ್ದಾನೆ.

ಅದರಲ್ಲೂ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಆಗಿತ್ತು. ಬಳಿಕ 53,000 ರೂಪಾಯಿ ಆಯ್ತು. ಅಂದಿನಿಂದಲೂ ಅಡಿಕೆ ತನ್ನ ಬೆಲೆಯನ್ನು ಏರಿಕೆ ಮಾಡಿಕೊಳ್ಳುತ್ತಲೆ ಬರುತ್ತಿದೆ. ಇದೀಗ 56,000 ಗಡಿ ದಾಟಿದೆ. ಇನ್ನು ಕೆಲವೇ ದಿನಗಳಲ್ಲಿ 60,000 ಮುಟ್ಟುವ ನಿರೀಕ್ಷೆಯೂ ಇದೆ. ಚನ್ನಗಿರಿಯನ್ನು ಅಡಿಕೆ ನಾಡು ಎಂದೇ ಕರೆಯುತ್ತಾರೆ. ಇಳಿಕೆಯಾಗಿದ್ದ ಅಡಿಕೆ ದರ ಇದೀಗ ಏರಿಕೆಯತ್ತ ಸಾಗುತ್ತಿರುವುದು ರೈತರಿಗೆ ಖುಷಿ ನೀಡಿದೆ. ಹೀಗೆ ಬೆಲೆ ಏರಿಕೆಯತ್ತಲೆ ಸಾಗಲಿ ಎಂದೇ ರೈತರು ಬೇಡಿಕೊಳ್ಳುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಅಡಿಕೆ ಮರಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿರುತ್ತದೆ. ಅಷ್ಟು ಕಷ್ಟಪಟ್ಟಿದ್ದಕ್ಕೂ ಕೊಂಚ ನೆಮ್ಮದಿಯೇ ಸರಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment