ದಾವಣಗೆರೆಯ ಬ್ಯಾಂಕ್ ರಾಬರಿ ಕಥೆ ; 6 ತಿಂಗಳ ಬಳಿಕ ಅಂದರ್ ಆಗಿದ್ದೇಗೆ ಖದೀಮರು..?

1 Min Read

ದಾವಣಗೆರೆ; ಕಳ್ಳತನ ಮಾಡಿದ ಕಳ್ಳರು ಸಣ್ಣದಾದ ಯಾವುದಾದರೊಂದು ಸುಳಿವನ್ನ ಬಿಟ್ಟು ಹೋಗಿರುತ್ತಾರೆ. ಅದರಿಂದಾನೇ ತಗಲಾಕಿಕೊಳ್ಳುತ್ತಾರೆ. ಇದೀಗ ದಾವಣಗೆರೆಯಲ್ಲೂ ಅಂಥದ್ದೇ ಘಟನೆಯೊಂದು ನಡೆದಿದೆ. ಲಂಚ ಕೇಳಿದ್ದಕ್ಕೆ ಅಣ್ಣ ತಮ್ಮಂದಿರು ಸೇರಿ ಬ್ಯಾಂಕ್ ಅನ್ನೇ ರಾಬರಿ ಮಾಡಿರೋ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.

ಹೌದು, ಬ್ಯಾಂಕ್ ರಾಬರಿಯಾಗಿ ಐದು ತಿಂಗಳ ಬಳಿಕ ಅದರ ಸುಳಿವು ಕೊಟ್ಟಿದ್ದು ಒಂದು ಗ್ಯಾಸ್ ಸಿಲಿಂಡರ್. ಪೊಲೀಸ್ ಠಾಣೆಯ 500 ಕಿಲೋ ಮೀಟರ್ ದೂರದಲ್ಲಿ ಗ್ಯಾಸ್ ಸಿಲಿಂಡರ್ ಒಂದು ಬಿದ್ದಿತ್ತು. ಅದು ಪೊಲೀಸರ ಕಣ್ಣಿಗು ಕಂಡಿತ್ತು. ಆ ಗ್ಯಾಸ್ ಸಿಲಿಂಡರ್ ತನಿಖೆ ಶುರು ಮಾಡಿದಾಗ ಗೊತ್ತಾಯ್ತು, ಬ್ಯಾಂಕ್ ರಾಬರಿಯಾಗಿರೋದು ಯಾರಿಂದ ಅಂತ.

ಆ ಇಬ್ಬರು ಅಣ್ಣತಮ್ಮ ತಮಿಳುನಾಡು ಮೂಲದವರು. ಆದರೆ ದಾವಣಗೆರೆಗೆ ಬಂದು ಏನಾದರೊಂದು ಬಿಸಿನೆಸ್ ಮಾಡಬೇಕೆಂದುಕೊಂಡಿದ್ದರು. ಅದರಲ್ಲೂ ಬೇಕರಿಯನ್ನು ಶುರು ಮಾಡೋಣಾ ಎಂದು ನಿರ್ಧಾರ ಮಾಡಿದ್ದರಂತೆ. ಬೇಕರಿ ಪದಾರ್ಥಗಳಿಗೆ ಡಿಮ್ಯಾಂಡ್ ಇದ್ದೆ ಇದೆ. ಟೇಸ್ಟ್ ಚೆನ್ನಾಗಿರೋದನ್ನ ನೀಡಿದರೆ ಜನ ಹುಡುಕಿಕೊಂಡು ಬರುತ್ತಾರೆ. ಹೀಗಾಗಿ ಬೇಕರಿಯನ್ನು ತೆರೆಯುವುದಕ್ಕೆ ನಿರ್ಧಾರ ಮಾಡುತ್ತಾರೆ.

ಅದಕ್ಕಾಗಿ ಹಣಕಾಸನ್ನು ಸೇರಿಸಲು ಪ್ರಯತ್ನಿಸುತ್ತಾರೆ. ಆಗ ಬ್ಯಾಂಕ್ ಗೆ ಲೋನ್ ಗೆ ಅಪ್ಲೈ ಮಾಡುತ್ತಾರೆ. ಲೋನ್ ಕೊಡಬೇಕು ಎಂದರೆ ಲಂಚ ಕೊಡಬೇಕು ಎಂದು ಬ್ಯಾಂಕ್ ಮ್ಯಾನೇಜರ್ ಡಿಮ್ಯಾಂಡ್ ಇಡ್ತಾರಂತೆ. ಆಗ ಲಂಚ ಕೊಡುವುದಕ್ಕೆ ಒಪ್ಪದ ಅಣ್ಣ ತಮ್ಮ ಒಂದು ಪ್ಲ್ಯಾನ್ ಮಾಡ್ತಾರಂತೆ. ತನ್ನ ಜೊತೆಗಾರರನ್ನು ಕಟ್ಟಿಕೊಂಡು ಬ್ಯಾಂಕ್ ರಾಬರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಬ್ಯಾಂಕ್ ರಾಬರಿ ಸಮಯದಲ್ಲಿ ಕಳ್ಳತನ ಆಗಿರೋದು 17 ಕೆಜಿ ಆಭರಣ. ಆದರೆ ಪೊಲೀಸರಿಂದ ರಿವಕರಿ ಆಗಿರೋದು ಕೇವಲ 220 ಗ್ರಾಂ. ಇನ್ನುಳಿದ ಆಭರಣದ ಬಗ್ಗೆ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *