Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವನದುರ್ಗೆಗೆ ಗೌತಮಿ ಮತ್ತೊಮ್ಮೆ ಭೇಟಿ : ಈ ಬಾರಿ ಗೆಳೆಯ, ಗಂಡನು ಸಾಥ್

---Advertisement---

ಮಂಗಳೂರು: ಸತ್ಯ ಖ್ಯತಿ ಗೌತಮಿ ಜಾದವ್ ಈ ಬಾರಿಯ ಬಿಗ್ ಬಾಸ್ ಗೆ ಬಂದಿದ್ದು, ಮತ್ತಷ್ಟು‌ ಖ್ಯಾತಿಯನ್ನು ಪಡೆದಿದ್ದಾರೆ. ಬರುವಾಗಲೇ ಪಾಸಿಟಿವ್ ಪಾಸಿಟಿವ್ ಅಂತ ಹೇಳಿದ್ದರು. ಅದೇ ರೀತಿ ಇರುವುದಕ್ಕೆ ಪ್ರಯತ್ನ ಕೂಡ ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ಧ್ಯಾನ ಮಾಡುತ್ತಾ, ಶಾಂತವಾಗಿ ಇರುವುದಕ್ಕೆ ಪ್ರಯತ್ನ ಮಾಡಿದರು. ಆದರೆ ಮಂಜು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದ್ರು.

ಮಂಜು ಮನೆಯವರ ಕೆಂಗಣ್ಣಿಗೂ ಗೌತಮಿ ಗುರಿಯಾದ್ರು. ಮಂಜು ಗೆಲುವಿನ ಸ್ಪರ್ಧಿಯಾಗಿದ್ದರು. ಆದರೆ ಗೌತಮಿಯ ಸ್ನೇಹ ಅದಕ್ಕೆ ಅಡ್ಡಿಯಾಯ್ತು ಎಂಬುದೇ ಹೊರಗಿನ ಚರ್ಚೆ. ಫಿನಾಲೆ ವೇದಿಕೆ ಏರುವುದಕ್ಕೂ ಮುನ್ನವೇ ಇಬ್ಬರು ಹೊರಗೆ ಬಂದರು. ಆದರೆ ಇಬ್ಬರ ಸ್ನೇಹ ಹೊರಗೆ ಬಂದ ಮೇಲೂ ಮುಂದುವರೆಯುತ್ತೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅದನ್ನ ಸತ್ಯ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಗೌತಮಿ,‌ ಮಂಜು, ಅಭಿಷೇಕ್ ಮೂವರು ಭೇಟಿಯಾಗಿ ಹಲವರ ಬಾಯಿ ಮುಚ್ಚಿಸಿದ್ದರು.

ಗೌತಮಿ ಸಿಕ್ಕಾಪಟ್ಟೆ ನಂಬುವ ತಾಯಿ ಅಂದ್ರೆ ವನದುರ್ಗೆ.ಇದು ಮಂಗಳೂರಿನಲ್ಲಿ ನೆಲೆಸಿರುವ ತಾಯಿ. ಬಿಗ್ ಬಾಸ್ ನಿಂದ ಹಿರಗೆ ಬಂದ ಕೂಡಲೇ ವನದುರ್ಗೆ ದೇವಸ್ಥಾನಕ್ಕೆ ಗೌತಮಿ ಭೇಟಿ ನೀಡಿದ್ದರು. ಇದೀಗ ಮತ್ತೊಮ್ಮೆ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ ಗೆಳೆಯ ಮಂಜು ಜೊತೆಗೆ. ಇಡೀ ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರೂ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ. ಈ ಫೋಟೋಗಳನ್ನು ಗೌತಮಿ ತಮ್ಮ ಸೋಷಿಯಲ್ ಮೀಡಿಯಾದ ಸ್ಟೋರೀಸ್ ನಲ್ಲಿ ಹಂಚಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...