Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂಜುನಾಥ್ ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ ಪೊಲೀಸರು

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 30: ಇತ್ತೀಚೆಗೆ ಕೋಣನೂರಿನಲ್ಲಿ ನಡೆದ ಮಂಜುನಾಥನ ಕೊಲೆ ಎಲ್ಲೆಡೆ ಸುದ್ದಿಯಾಗಿತ್ತು. 19 ವರ್ಷದ ರಕ್ಷಿತಾ ಎಂಬ ಯುವತಿಯನ್ನ 43 ವರ್ಷ ಮಂಜುನಾಥ್ ಮದುವೆಯಾಗಿದ್ದನೆಂಬ ಕಾರಣಕ್ಕೆ ಯುವತಿಯ ಮನೆಯವರು ಆತನನ್ನು ಕೊಲೆ ಮಾಡಿದ್ದರು. ಮಂಜುನಾಥ್ ಮೊದಲ ಹೆಂಡತಿಯ ಸಾವಿನ ಕಾರಣದಿಂದಾನೇ ಜೈಲಿನಲ್ಲಿದ್ದು ಬಂದವನು. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

 

ದಿವ್ಯಾ, ಪ್ರಸನ್ನಕುಮಾರ, ಕಾವ್ಯ, ಶಂಕ್ರಮ್ಮ ಬಸವರಾಜಪ್ಪ, ಹರೀಶ, ಜಗದೀಶ್ ಬಂಧಿತ ಆರೋಪಿಗಳು. ಈ ವೇಳೆ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡರು. ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ.ದಿನಕರ್.ಪಿ.ಕೆ. ಪೊಲೀಸ್ ಉಪಾಧೀಕ್ಷಕರು, ಚಿತ್ರದುರ್ಗ ಉಪವಿಭಾಗ ರವರ ನಿರ್ದೇಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಸಾದ್, ಪಿ. ರವರ ನೇತೃತ್ವದಲ್ಲಿ ಪಿ.ಎಸ್.ಐ. ರವರುಗಳಾದ ಸುರೇಶ ಮತ್ತು ಬಸವರಾಜ ಮತ್ತು ಸಿಬ್ಬಂದಿಯವರಾದ ಯಶ್ಯಾಖಾನ್, ಯತೀಶ್, ಎಂಜೆ. ಶಿವಕುಮಾರ್ ಬಿ.ಕೆ. ಜ್ಯೋತಿ ಎನ್.ಬಿ. ಶ್ರೀಮತಿ ಮುಬೀನಾ, ಸಿದ್ದೇಶ.ಆರ್. ಶಿವರಾಜ್, ಕೆ.ಜಿ. ಹಳೆಮನೆ ಮಂಜಪ್ಪ, ತಿಪ್ಪೇಶ, ಹೆಚ್.ಎಂ. ಅಣ್ಣಪ್ಪ, ಬಿ.ಎನ್. ಶಿವಕುಮಾರ. ಜೆ. ಕಲ್ಲೇಶ.ಎಸ್. ಶ್ರೀನಿವಾಸ ಟಿ.ಆರ್. ಶ್ರೀಮತಿ ಸುಜಾತ, ಹೆನ್ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು.

ರಕ್ಷಿತಾಳನ್ನು ಮಂಜುನಾಥ್ ಪ್ರೀತಿಸಿ ಮದುವೆಯಾಗಿದ್ದ ಕಾರಣ ಯುವತಿಯ ಮನೆಯವರು ಹಲ್ಲೆ ನಡೆಸುತ್ತಾರೆ. ಮಂಜುನಾಥ್ ಹಲ್ಲೆಯ ಬಳಿಕ ಮಂಜುನಾಥ್ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment