ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ | ಗೀತಾ ಭರಮಸಾಗರ ನಾಮಪತ್ರ ಸಲ್ಲಿಕೆ

1 Min Read

 

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 05 : ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗೀತಾ ಭರಮಸಾಗರ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಶಾಖೆಯ ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಾಮಪತ್ರ ಸಲ್ಲಿಸಿದರು.

ಚಿತ್ರದುರ್ಗ ತಾಲ್ಲೂಕಿನ ಚಿಕ್ಕಬೆನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ, ಸಾಂಸ್ಕೃತಿಕ, ಸಾಹಿತ್ಯಿಕ ಪರಿಚಾರಕಿ, ಲೇಖಕಿ, ಸಂಪನ್ಮೂಲ ವ್ಯಕ್ತಿ ಚಿಂತಕಿಯಾಗಿರುವ  ಗೀತಾ ಭರಮಸಾಗರ ಅವರು  ಶಿಕ್ಷಣ ಇಲಾಖೆಯ ತಂಡದೊಂದಿಗೆ ಜಿಲ್ಲಾಧ್ಯಕ್ಷರಾದ ತಿಮ್ಮಾರೆಡ್ಡಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ನಾಮ ಪತ್ರವನ್ನು ಚುನಾವಣಾ ಅಧಿಕಾರಿಗಳಾದ ಡಿ.ಟಿ. ಜಗನ್ನಾಥ್ ಅವರ ಪರವಾಗಿ ಬಿ ಆರ್ ಸಿ ಸಂಪತ್ ಕುಮಾರ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ತಿಮ್ಮಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಂತೇಶ್ , ತಾಲ್ಲೂಕು ಅಧ್ಯಕ್ಷರಾದ ಕೆಂಚಪ್ಪ,  ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಜಿಲ್ಲಾಧ್ಯಕ್ಷರೂ, ವಕೀಲರಾದ ಮಾಲತೇಶ್ ಅರಸ್, ತಿಪ್ಪೇಸ್ವಾಮಿ, ವೀರೇಶ್ ಸುರೇಶ್, ಮಂಜುನಾಥ್ ಆಚಾರ್, ಯಲ್ಲಪ್ಪ, ತಾಜಿರ್ ಭಾಷ, ಪರ್ವೀನ್ ತಾಜ್, ವೀರಣ್ಣ, ದುರುಗೇಶಪ್ಪ, ರೂಪ, ತಿಪ್ಪೇರುದ್ರಪ್ಪ,ಹೊನ್ನಮ್ಮ, ಶಶಿಕಲಾ, ಚಿತ್ರಲತಾ, ಶಾರದಾ, ಮಹಂತೇಶ್,  ಪದ್ಮಾ,  ಸಾಂಸ್ಕೃತಿಕ ಚಿಂತಕ ಡಿ.ಓ. ಮುರಾರ್ಜಿ  ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *