Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗಿಡಗಳನ್ನು ನೆಟ್ಟು ಸುಮ್ಮನಾದರೆ ಸಾಲದು ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು : ಕವಿ ಕೊರ್ಲಕುಟೆ ಜೆ.ತಿಪ್ಪೇಸ್ವಾಮಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 06 : ಗಿಡಗಳನ್ನು ಹಾಕಿ ಸುಮ್ಮನಾದರೆ ಸಾಲದು ಅವುಗಳ ರಕ್ಷಣೆಯ ಸಹ ಜವಾಬ್ದಾರಿ ಹೊರಬೇಕು ಎಂದು ಕವಿ ಕೊರ್ಲಕುಟೆ ಜೆ.ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಕೋಡಿ ಭಾಗದಲ್ಲಿರುವ ಕೋಡಿ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸಮೀಪ ಒಂದು ಎಕರೆ ಭಾಗದಲ್ಲಿ ದೇವಸ್ಥಾನದ ಉದ್ಯಾನದಲ್ಲಿ ಗಿಡ ನಡುವ ಕಾರ್ಯಕ್ರದಲ್ಲಿ ಗಿಡ ನೆಟ್ಟು ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಸಾಕಷ್ಟು ಗಿಡಗಳನ್ನು ನೀಡಲಾಗುತ್ತಿದೆ. ಇಂತಹ ಅನುಕೂಲಗಳನ್ನು ಪಡೆದು ಪ್ರತಿಯೊಬ್ಬರು ಗಿಡ ಹಾಕಿ ಮರಗಳನ್ನು ಬೆಳೆಸುವುದರ ಮೂಲಕ ಪರಿಸರದ ಸಮತೋಲನ ತಪ್ಪಿಸಬಹುದು. ಬರಿ ಗಿಡ ಹಾಕಿದರೆ ಸಾಲದು ಗಿಡಗಳಿಗೆ ನೀರು ಹಾಕಿ ಅವುಗಳ ರಕ್ಷಣೆ ಮಾಡಿದಾಗ ಮರವಾಗಿ ಬೆಳೆದು ಪ್ರತಿಯೊಬ್ಬರಿಗೂ ನೆರಳಾಗಿ ಫಲವಾಗಿ ಸಹಕಾರಿಯಾಗುತ್ತದೆ. ಈ ಉದ್ಯಾನವನದಲ್ಲಿ ಹಲವಾರು ಗಿಡಗಳನ್ನು ಬೆಳೆಸಿದ್ದು ಈ ಗಿಡಗಳು ಇಲ್ಲಿನ ದೇವಸ್ಥಾನಕ್ಕೆ ಮೆರಗು ತಂದಿದೆ ಎಂದರು.

ಗ್ರಾಮಪಂಚಾಯಿತಿ ಹಾಗೂ ತಾ.ಪಂ ನಾಮನಿರ್ದೇಶಿತ ಸದಸ್ಯ ಎಂ. ರಮೇಶ ಮಾತನಾಡಿ, ಕೋಡಿ ಮಲ್ಲೇಶ್ವರ ದೇವಸ್ಥಾ ಪೂರ್ವಜರ ಕಾಲದಿಂದಲೂ ಹಳೆ ದೇವಸ್ಥಾನವಾಗಿದ್ದ ಕೋಡಿ ಮಲ್ಲೇಶ್ವರ ದೇವಸ್ಥಾನ ನವೀಕರಣಕ್ಕೆ ಶಾಸಕರು ನೀಡಿರುವ ೧೦ ಲಕ್ಷ ಅನುದಾನ ಬಳಕೆ ಮಾಡಿಕೊಂಡು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ನಿರ್ಮಾಣ ಹಂತದಲ್ಲಿದೆ. ಇಲ್ಲಿಗೆ ಬರುವ ಭಕ್ತರ ವಿಶ್ರಾಂತಿಗೆ ಅನುಕೂಲವಾಗುವ ರೀತಿ ಸಮೀಪದ ೧ ಎಕರೆ ಭೂಮಿಯಲ್ಲಿ ಬಾದಾಮಿ, ಗೋಡಂಬಿ, ಅರಳಿ, ಹಲಸು, ನೇರಳೆ, ಬೇವು, ಹೊಂಗೆ, ಬನ್ನಿ, ಬಿಲ್‌ಪತ್ರೆ ಗಿಡಗಳನ್ನು ಎರಡು ವರ್ಷದಿಂದ ಪೋಷಣೆ ಮಾಡಲಾಗಿದೆ. ಈಗ ಗಿಡಗಳು ಮರಗಳಾಗಿ ಬೆಳೆಯುತ್ತಿದ್ದು ಇಲ್ಲಿ ಹಣ್ಣಿನ ಗಿಡ ಹಾಕಿರುವುದರಿಂದ ಇವಳಿಗೆ ಪಲಕೊಟ್ಟರೆ ಮನುಷ್ಯನಿಗೆ ನೆರಳು ಕೊಡುತ್ತದೆ ಉತ್ತಮ ಆರೋಗ್ಯಕ್ಕೆ ಹಸಿರೀಕರಣ ಇರಬೇಕು ಎಂದರು. ಎಂ. ದ್ಯಾಮಣ್ಣ, ರಾಜಪ್ಪ, ಮಂಜುನಾಥ ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶರಣ ಸಂಸ್ಕೃತಿ ಉತ್ಸವ 2024 : ನಸಾಬ್ ಚಲನಚಿತ್ರ ಪೋಸ್ಟರ್ ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 : ಕೆ. ಕಿಶೋರ್ ಕುಮಾರ್ ನಿರ್ದೇಶನದ ಕೀರ್ತಿಕುಮಾರ್ ನಾಯ್ಕ ನಟಿಸಿರುವ ಇದೇ ತಿಂಗಳ 25 ರಂದು ಬಿಡುಗಡೆಗೊಳ್ಳಲಿರುವ ನಸಾಬ್ ಚಿತ್ರದ ಪೋಸ್ಟರ್ ಗಳನ್ನು ಚಿತ್ರದುರ್ಗದಲ್ಲಿ ಶರಣ ಸಂಸ್ಕøತಿ ಉತ್ಸವ

ಚಿತ್ರದುರ್ಗ ಜಿಲ್ಲಾ ವಕೀಲರಿಂದ ಅ13 ರಂದು ನಾಟಕ ಪ್ರದರ್ಶನ : ರಾಜವೀರ ಮದಕರಿನಾಯಕ”ಕ್ಕೆ ಭರ್ಜರಿ‌ ತಾಲೀಮು

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 :  ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ ಹಾಗೂ ಜಿಲ್ಲಾ ವಕೀಲರ ಸಾಂಸ್ಕೃತಿಕ ಬಳಗ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 13 ರಂದು ಮದಕರಿ ನಾಯಕ ಜಯಂತಿ ಹಾಗೂ ದಸರಾ

ಗಿಡಗಳನ್ನು ನೆಟ್ಟು ಸುಮ್ಮನಾದರೆ ಸಾಲದು ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು : ಕವಿ ಕೊರ್ಲಕುಟೆ ಜೆ.ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 06 : ಗಿಡಗಳನ್ನು ಹಾಕಿ ಸುಮ್ಮನಾದರೆ ಸಾಲದು ಅವುಗಳ ರಕ್ಷಣೆಯ ಸಹ ಜವಾಬ್ದಾರಿ ಹೊರಬೇಕು

error: Content is protected !!