Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೀವೂ ಸಸ್ಯಹಾರಿಗಳಾ..? ಕಬ್ಬಿಣಾಂಶ.. ಕ್ಯಾಲ್ಶಿಯಂಗಾಗಿ ರಾಗಿ ಸೇವಿಸಿ..!

Facebook
Twitter
Telegram
WhatsApp

ರಾಗಿ ತಿಂದವ ನಿರೋಗಿಯಾಗಿರ್ತಾನೇ ಅನ್ನೋದು ಲೋಕಾರೂಢಿ ಮಾತು. ಹಾಗೇ ಹಿರಿಯರ ಅನುಭವದ ಮಾತು. ರಾಗಿ ತಿನ್ನುವುದರಿಂದ ದೇಹ ಶಕ್ತಿಯುತವಾಗಿಯೂ ಇರುತ್ತೆ, ರೋಗಗಳಿಂದಾನೂ ದೂರ ಇರಬಹುದು. ಯಾಕಂದ್ರೆ ರಾಗಿಯಲ್ಲಿ ಅಷ್ಟು ಪೋಷಾಕಾಂಶಗಳು ಇರುತ್ತವೆ. ನಮ್ಮ ದೇಹಕ್ಕೆ ಎಲ್ಲಾ ರೀತಿಯಿಂದಾನು ಅನುಕೂಲ ಒದಗಿಸುತ್ತದೆ.

ರಾಗಿಯಲ್ಲಿ ಕ್ಯಾಲ್ಶಿಯಂ ಹಾಗೂ ಕಭಿಣದ ಅಂಶಗಳು ಯಥೇಚ್ಛವಾಗಿರುತ್ತವೆ. ಈ ಎರಡು ನಮ್ಮ ದೇಹಕ್ಕೆ ಬೇಕಾದ ಬಹುಮುಖ್ಯವಾದ ಪೋಷಕಾಂಶಗಳು. ಕಬ್ಬಿಣದ ಪೂರೈಕೆ ದೇಹದಲ್ಲಿ ಹೆಚ್ಚಾಗಿಯೇ ಇರಬೇಕು. ಹೀಗಾಗಿ ಈ ಎರಡು ಅಂಶಗಳು ದೇಹದಲ್ಲಿ ಇರಬೇಕು ಅಂದ್ರೆ ರಾಗಿಯನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವಿಸಬೇಕಾಗುತ್ತದೆ.

ಇನ್ನು ಮನುಷ್ಯನಿಗೆ ಕ್ಯಾಲ್ಶಿಯಂ ಅನ್ನೋದು ಬಹಳ ಮುಖ್ಯ. ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಅತ್ಯಂತ ಅವಶ್ಯಕವಾಗಿದೆ. ಈಗಂತೂ ಸೂರ್ಯನ ಬಿಸಿಲನ್ನೇ ನೋಡದ ಮಕ್ಕಳಲ್ಲಿ ಮೂಳೆಗಳ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತದೆ. ಅದಕ್ಕಾಗಿ ವೈದ್ಯರು, ಔಷಧಿಗಳು ಅಂತಾನೇ ಹೋಗುವುದು ಹೆಚ್ಚು. ಅಡುಗೆ ಮನೆಯಲ್ಲಿಯೇ, ತಿನ್ನುವ ಆಹಾರದಲ್ಲಿಯೇ ನಾವೂ ಕ್ಯಾಲ್ಶಿಯಂ ಕಂಡುಕೊಳ್ಳಬಹುದು. ಅದರಲ್ಲಿ ಮುಖ್ಯವಾಗಿ ಬಳಕೆ ಮಾಡಬೇಕಿರುವುದೇ ರಾಗಿ.

ಮಾಂಸಹಾರಿಗಳಿಗೆ ಹೇಗೋ ಒಂದಷ್ಟು ಪೋಷಕಾಂಶಗಳು ಸಿಗುತ್ತವೆ. ಆದರೆ ಸಸ್ಯಹಾರಿಗಳಿಗೆ ವಿಟಮಿನ್ ಕೊರತೆ ಎದುರಾಗಬಾರದು ಎಂದರೆ ರಾಗಿ ಬಳಕೆ ಉತ್ತಮ. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಇದೆ. ರಾಗಿಯನ್ನ ಸೇವನೆ ಮಾಡುವುದಕ್ಕೆ ಹಲವು ವಿಧಗಳಿವೆ. ಹಲವು ಜಿಲ್ಲೆಯಲ್ಲಿ ಮುದ್ದೆ ಮಾಡಿ ಸವಿದರೆ, ಇನ್ನು ಕೆಲವು ಕಡೆ ಮುದ್ದೆಯ ಬಗ್ಗೆ ಪರಿಚಯವಿರಲ್ಲ. ಹೀಗಾಗಿ ರಾಗಿಯನ್ನ ಮಿಲ್ಲೆಟ್ ರೂಪದಲ್ಲು ತಿನ್ನಬಹುದು. ಹಾಗೇ ಇಡ್ಲಿ, ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಒಟ್ಟಾರೆ ದೇಹಕ್ಕೆ ಬೇಕಾದ ಪೋಷಾಕಾಂಶಗಳ ಆಗರವಿರುವ ರಾಗಿಯನ್ನು ತಪ್ಪದೆ ಸೇವಿಸಿ.

 

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!