Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳ್ಳಕೆರೆ | ವಿಷಜಂತು ಕಚ್ಚಿ ಬಾಲಕ ಸಾವು

Facebook
Twitter
Telegram
WhatsApp

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 25 : ಮಳೆಗಾಲ ಬೇರೆ ಇದೆ. ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಾ ಇರುತ್ತವೆ. ಅದರಲ್ಲೂ ಜಮೀನು ಗಳಿಗೆ ಹೋಗುವವರು, ಜಮೀನಿನಲ್ಲಿರುವ ಮನೆಗಳಲ್ಲಿ ಮಲಗುವವರು ಎಚ್ಚರದಿಂದ ಇರಬೇಕು. ಜಮೀನಿನಲ್ಲಿರುವ ಮನೆಗಳನ್ನು ಕ್ಲೀಸ್ ಮಾಡದೆ ಇದ್ದಲ್ಲಿ ಮಲಗುವುದಕ್ಕೆ ಹೋಗಬೇಡಿ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಚಳ್ಳಕೆರೆಯಲ್ಲಿ ನಡೆದ ಘಟನೆ.

ಜಮೀನಿನ ಶೆಡ್ ಒಂದರಲ್ಲಿ ಮಲಗಿದ್ದ ಬಾಲಕ ಈಗ ಶವವಾಗಿ ಬಿದ್ದಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರವಿತೇಜ ಹೀಗೆ ಸತ್ತು ಮಲಗಿರುವುದು. ಈ ಬಾಲಕನಿಗೆ ಈಗಿನ್ನು ಕೇವಲ 8 ವರ್ಷ. ಆಟವಾಡಿಕೊಂಡಿದ್ದವ ಈಗ ಜೀವಂತವಾಗಿಲ್ಲ. ಅದಕ್ಕೆ ಕಾರಣ, ಜಮೀನಿಗೆ ಹೋಗಿ ಶೆಡ್ ನಲ್ಲಿ ಮಲಗಿದ್ದಷ್ಟೇ.

ಎಂಟು ವರ್ಷದ ಮೃತ ರವಿತೇಜ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದವರು. ಸಿದ್ದಾಪುರದ ಬಳಿಯೇ ಇವರದ್ದು ಜಮೀನು ಇದೆ. ಆ ಜಮೀನಿನಲ್ಲಿ ಏನಾದರು ವಸ್ತುಗಳನ್ನು ಹಾಕುವುದಕ್ಕೆಂದು ಶೆಡ್ ನಿರ್ಮಾಣ‌ ಮಾಡಿದ್ದಾರೆ. ಇತ್ತೀಚೆಗೆ ಒಂದೇ ಸಮನೆ ಮಳೆ ಬಂದು ಈಗ ಎರಡ್ಮೂರು ದಿನದಿಂದ ವಿಶ್ರಾಂತಿ ನೀಡಿದೆ. ಕೊಂಚ ಬಿಸಿಲು ತಟ್ಟಿದೆ. ಇಂದು ಭಾನುವಾರವೂ ಆದ ಕಾರಣ ಬಾಲಕ ಜಮೀನಿಗೆ ಹೋಗಿದ್ದಾನೆ. ಮಧ್ಯಾಹ್ನದ ಸಮಯ ಆಗಿದ್ದರಿಂದ ನಿದ್ದೆ ಬಂದಿದೆ. ತಮ್ಮ ಜಮೀನಿನಲ್ಲಿಯೇ ಶೆಡ್ ಇದ್ದ ಕಾರಣ ಬಾಲಕ ಸೀದಾ ಹೋಗಿ ಶೆಡ್ ನಲ್ಲಿ ಮಲಗಿದ್ದಾನೆ. ಆದರೆ ಅದ್ಯಾವ ವಿಷ ಜಂತು ಕಚ್ಚಿತೋ ಏನೋ, ಬಾಲಕ ಸಾವನ್ನಪ್ಪಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಜಮೀನಿಗೆ ಹೋದ ಬಾಲಕ ಸೀದಾ ಮನೆಗೆ ಬಂದಿದ್ದರೆ ಜೀವಂತವಾಗಿ ಆದ್ರೂ ಇರುತ್ತಿದ್ದ. ಆದರೆ ವಿಧಿ ಶೆಡ್ ನಲ್ಲಿ ಯಾವುದೋ ವಿಷ ಜಂತು ಕಚ್ಚಿ ಪ್ರಾಣವನ್ನೇ ಬಲಿ ಪಡೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!