ಸುದ್ದಿಒನ್, ಚಿತ್ರದುರ್ಗ, ಜುಲೈ.31 : ತಾಲ್ಲೂಕಿನ ಭೀಮ ಸಮುದ್ರದಲ್ಲಿ ಇತ್ತೀಚೆಗೆ ಜಯಣ್ಣ ನವರ ಮಳೆಯಿಂದ ಕುಸಿದಿತ್ತು. ಇಂದು ಅವರ ಮನೆಗೆ ಶಾಸಕ ಕೆ.ಸಿ. ವೀರೇಂದ್ರ ಅವರು ಭೇಟಿ ನೀಡಿ 1,20,000 ರೂಪಾಯಿಗಳ ಪರಿಹಾರದ ಚೆಕ್ ವಿತರಿಸಿದರು.
ಶಾಸಕರು ಮಾತನಾಡಿ ಜಯಣ್ಣನವರಿಗೆ ಸರ್ಕಾರದಿಂದ 1,20,000 ರೂಗಳ ಚೆಕ್ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯಿಂದ ಬರುವ ಮನೆ, ಮೃತಪಟ್ಟ ಮೇಕೆಗೆ ಪಶು ಇಲಾಖೆಯಿಂದ ಒಂದಕ್ಕೆ 5000 ರೂಗಳು ಬರುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ, ಉಪ ತಹಸಿಲ್ದಾರ್ ನಾಗರಾಜ್, ಆರ್ ಐ ಪ್ರಾಣೇಶ್, ವಿ ಎ ಶ್ರೀನಿವಾಸ್. ಭೀಮಸಮುದ್ರದ ಗ್ರಾಮಸ್ಥರಾದ ಶಿರಾ ಚಂದ್ರಪ್ಪ. ಹಾಗೂ ಹಲವು ಹಿರಿಯ ಮುಖಂಡರುಗಳು ಇದ್ದರು.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






