Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಿನ್ನೆ ಅವಮಾನ.. ಇಂದು ಸನ್ಮಾನ : ರೈತನ ಬಳಿ ಕ್ಷಮೆ ಕೇಳಿದ ಜಿಟಿ ಮಾಲ್ ಸಿಬ್ಬಂದಿ..!

---Advertisement---

ಬೆಂಗಳೂರು: ರಾಯಚೂರು ಮೂಲದ ರೈತನಿಗೆ ನಿನ್ನೆ ಜಿಟಿ ಮಾಲ್ ಸಿಬ್ಬಂದಿ ಅವಮಾನ ಮಾಡಿದ್ದರು. ಪಂಚೆ ಹಾಕಿದ್ದ ರೈತನನ್ನು ಒಳಗೆ ಬಿಡದೆ ಅವಮಾನ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇಂದು ಕನ್ನಡಪರ ಸಂಘಟನೆಯವರು ಜಿಟಿ ಮಾಲ್ ಮುಂದೆ ಪ್ರತಿಭಟನೆಗೆ ಕೂತಿದ್ದರು. ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.

ಇನ್ನು ಪಂಚೆ ಹಾಕಿದ್ದವರನ್ನು ಒಳಗೆ ಬಿಡಲ್ಲ ಎಂದಿದ್ದ ಜಿಟಿ ಮಾಲ್ ಒಳಗೆ ಇಂದು ಬೆಳಗ್ಗೆಯಿಂದ ಪಂಚೆ ಹಾಕಿದ ಹಿರಿಯರೇ ಭೇಟಿ ನೀಡಿದ್ದರು. ಪ್ರತಿಭಟನೆ ದೊಡ್ಡ ಮಟ್ಟಕ್ಕೆ ತಲುಪುವುದಕ್ಕೂ ಮುನ್ನ ಎಚ್ಚೆತ್ತ ಜಿಟಿ ಮಾಲ್ ಸಿಬ್ಬಂದಿ ರೈತನನ್ನು ಕ್ಷಮೆ ಕೇಳಿದ್ದಾರೆ. ರೈತ ಫಕೀರಪ್ಪನನ್ನು ಕರೆಸಿ ಕ್ಷಮೆಯಾಚಿಸಿ, ಹಾರ ಹಾಕಿ ಸನ್ಮಾಮ ಮಾಡಿದ್ದಾರೆ. ನಿನ್ನೆ ಅವಮಾನ ಮಾಡಿದ್ದವರೇ ಇಂದು ಫಕೀರಪ್ಪನಿಗೆ ಸನ್ಮಾನ ಮಾಡಿದ್ದಾರೆ.

ರೈತ ಫಕೀರಪ್ಪ ಮೂಲತಃ ರಾಯಚೂರಿನವರು. ಅವರ ಮಗ ನಾಗರಾಜು ಇಲ್ಲೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನನ್ನು ನೋಡುವುದಕ್ಕೆ ಫಕೀರಪ್ಪ ಬೆಂಗಳೂರಿಗೆ ಬಂದಿದ್ದರು. ಎಲ್ಲಾ ಮಕ್ಕಳಿಗೂ ಅಪ್ಪ ಅಮ್ಮನನ್ನು ಸುತ್ತಾಡಿಸುವ ಆಸೆ ಇದ್ದೆ ಇರುತ್ತದೆ. ಅದೆಲ್ಲೂ ಬೆಂಗಳೂರೆಂಬ ಮಹಾನಗರದಲ್ಲಿ ಹಳ್ಳಿ ಪ್ರದೇಶದಲ್ಲಿರುವ ಅಪ್ಪ-ಅಮ್ಮನಿಗೆ ತೋರಿಸಲು ಸಾಕಷ್ಟು ಪ್ರದೇಶಗಳಿದ್ದಾವೆ. ಅದರಂತೆ ನಾಗರಾಜು, ತನ್ನ ತಂದೆ ಕರೆದುಕಿಂಡು ಜಿಟಿ ಮಾಲ್ ಗೆ ಹೋಗಿದ್ದರು. ಸಿನಿಮಾ ತೋರಿಸಿಕೊಂಡು ಬರುವುದಕ್ಕೆಂದು. ಆದರೆ ಪಂಚೆ ತೊಟ್ಟಿದ್ದ ಫಕೀರಪ್ಪನನ್ನು ಸಿಬ್ಬಂದಿಗಳು ಗೇಟಲ್ಲಿಯೇ ತಡೆದರು. ಒಳಗೆ ಬಿಡದೆ, ನಮಗೆ ಪಂಚೆ ತೊಟ್ಟವರನ್ನು ಬಿಡಬಾರದೆಂಬ ಸೂಚನೆ ಇದೆ ಎಂದು ದಬಾಯಿಸಿ ಕಳುಹಿಸಿದ್ದರು. ಇದೀಗ ಮಾಲ್ ಸಿಬ್ಬಂದಿಗಳ ತಪ್ಪು ಅವರಿಗೆ ಅರಿವಾಗುವಂತೆ ಮಾಧ್ಯಮದವರು, ಕನ್ನಡ ಪರ ಸಂಘಟನೆಗಳು ಮಾಡಿದ್ದು, ಕ್ಷಮೆ ಕೇಳಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment