Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಪಾಯಿತಲೇ ಪರಾಕ್ : ಮೈಲಾರ ಕಾರ್ಣಿಕ‌ದ ಅರ್ಥ ಏನು ?

---Advertisement---

 

ವಿಜಯನಗರ: ಮೈಲಾರ ಕಾರ್ಣಿಕಗೆ ಸಾಕಷ್ಟು ಮಹತ್ವವಿದೆ. ಇದೀಗ ಇಂದು ಕೂಡ ಮೈಲಾರ ಕಾರ್ಣಿಕ ನುಡಿದಿದೆ. ಇದನ್ನು ಕೇಳಿದ ಜನ ಸಂತಸಗೊಂಡಿದ್ದಾರೆ. ಸಂಪಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದಿದೆ.

ಇಂದು (ಸೋಮವಾರ) ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರ್ಣಿಕ ಜರುಗಿದೆ. ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಅಶ್ವರೂಢರಾಗಿ ಡೆಂಕನಮರಡಿಗೆ ಆಗಮಿಸಿ, ಕಾರ್ಣಿಕಾ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಬಿಲ್ಲು ಏರಿದ ಗೊರವಯ್ಯ ಕಾರ್ಣಿಕಾ ನುಡಿದು ಕೆಳಕ್ಕೆ ಜಿಗಿದರು. ಬಳಿಕ ಗೊರವ ಸಮುದಾಯದವರು ಕಂಬಳಿಯಲ್ಲಿ ಸೆರೆ ಹಿಡಿದರು.

ಕಾರ್ಣಿಕಾ ನುಡಿಯಿಂದ ಸಂತಸಗೊಂಡಿದ್ದಾರೆ ಜನ. ಪ್ರಸಕ್ತ ವರ್ಷದ ದೈವ ವಾಣಿಯಲ್ಲಿ ಶುಭಫಲ ಅಡಗಿದೆ. ಈ ವರ್ಷ ಮಳೆ, ಬೆಳೆ ಸಂಪಾಗಿ, ನಾಡು ಸಮೃದ್ದಿಯಾಗಲಿದೆ ಎಂದು ಕಾರ್ಣಿಕಾ ನುಡಿದಿದ್ದಾರೆ. ಕಾರ್ಣಿಕಾ ನುಡಿ ಕೇಳುತ್ತಿದ್ದಂತೆ ನೆರೆದಿದ್ದ ಜನ ಸಂತಸಗೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment