Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾಮಾಜಿಕ ಕಾರ್ಯಗಳಿಗೆ ಜನ ಬೆಂಬಲವಿದ್ದರೆ ಪೂರ್ವಜರು ಬಿಟ್ಟು ಹೋಗಿರುವ ಆದರ್ಶ, ಮೌಲ್ಯಗಳು ಉಳಿಯಲು ಸಾಧ್ಯ : ಎಸ್.ಆರ್. ಲಕ್ಷ್ಮಿಕಾಂತ ರೆಡ್ಡಿ

---Advertisement---

 

ಸುದ್ದಿಒನ್, ಚಿತ್ರದುರ್ಗ, ಡಿ, 18 : ಧಾರ್ಮಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಪುಣ್ಯ ವಿಶೇಷಗಳಲ್ಲಿ ಒಂದು. ಇಂತಹ ಸದಾವಕಾಶ ನನಗೆ ನಮ್ಮ ಸಂಸ್ಥೆಯ ಮೂಲಕ  ಒದಗಿ ಬಂದಿದೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸಾಮಾಜಿಕ ಕಾರ್ಯಗಳಿಗೆ ಜನ ಬೆಂಬಲ  ಕೊಡುತ್ತಿದ್ದರೆ ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಆದರ್ಶ ಮೌಲ್ಯಗಳು ಉಳಿಯಲು ಸಾಧ್ಯ ಎಂದು  ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಸಹಕಾರಿ ಧುರೀಣ ಎಸ್.ಆರ್. ಲಕ್ಷ್ಮಿಕಾಂತ ರೆಡ್ಡಿ ಅವರು ಅಭಿಪ್ರಾಯಪಟ್ಟರು.

ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ಗಮಕ ಕಲಾಭಿಮಾನಿಗಳ ಸಂಘ, ಜೆಸಿಆರ್ ಗಣಪತಿ ದೇವಾಲಯ ಸಮಿತಿ ಹಾಗೂ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಚಿತ್ರದುರ್ಗ, ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಾಸಿಕ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ರಾಮಾಯಣ ಕಾವ್ಯದ ಸೀತಾನ್ವೇಷಣೆ ಭಾಗದ ವಾಚನವನ್ನು ಶಿವಮೊಗ್ಗದ ಹೊಸಳ್ಳಿಯ ಪ್ರಸಾದ್ ಭಾರಧ್ವಜ್ ಅವರು ಹೃದಯಂಗಮವಾಗಿ ವಾಚನ ಮಾಡಿದರು. ಇದಕ್ಕೆ ಸಂವಾದಿಯಾಗಿ ಚಿಕ್ಕಮಗಳೂರಿನ ಗಮಕಿ, ನಿವೃತ್ತ ಉಪನ್ಯಾಸಕರಾದ ಕಲಾಶ್ರೀ ರಾಮಸುಬ್ರಾಯ ಶೇಟ್ ಅವರು ಕಾವ್ಯದ ವ್ಯಾಖ್ಯಾನವನ್ನು  ಬಹು ಸೂಕ್ಷ್ಮವಾದ  ತತ್ವಾದರ್ಶಗಳನ್ನು ಭಾವಪೂರ್ಣವಾಗಿ  ಮನಗಾಣಿಸಿದರು.
ಜೆಸಿಆರ್ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷರಾದ ಜಿ. ಆರ್. ಕೃಷ್ಣಮೂರ್ತಿ ಅವರು ಮುಖ್ಯ ಅತಿಥಿಗಳಾಗಿ  ಭಾಗವಹಿಸಿದ್ದರು.

ಗಮಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ .ಆರ್. ರಮಾದೇವಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗಮಕಲಾ ಸಂಘಕ್ಕೆ ಇದೀಗ  40 ವರ್ಷ ತುಂಬಿದೆ.ಜನತೆಯ  ಸಹಕಾರ, ನೆರವು ಮತ್ತು ಪ್ರೋತ್ಸಾಹ ಇದೇ ರೀತಿ ಸದಾ ಸಿಕ್ಕರೆ ನಲವತ್ತು  ಕಾರ್ಯಕ್ರಮಗಳನ್ನು ಜನತೆಯ ಹತ್ತಿರವೇ ಹೋಗಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮರ್ಚೆಂಟ್ಸ್ ಬ್ಯಾಂಕ್ ನ ಅಧ್ಯಕ್ಷರಾದ ಎಸ್ .ಆರ್  ಲಕ್ಷ್ಮಿ ಕಾಂತ ರೆಡ್ಡಿ ಅವರನ್ನು ಸಂಘಗಳ  ವತಿಯಿಂದ ಸನ್ಮಾನಿಸಿ  ಗೌರವಿಸಲಾಯಿತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment