Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

BBK10: ವಿನಯ್ ಗೆ ಗಿಫ್ಟ್ ಆಗಿ ಸಿಕ್ತು ಸಂಗೀತಾ ಬಳೆಗಳ ಫೋಟೋ: ಯಾಕೆ ಗೊತ್ತಾ..?

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಧ್ಯೆ ಜಗಳಗಳು ಆಗುವುದು ಕಾಮನ್. ಆದರೆ ಆ ಜಗಳದಲ್ಲಿ ಬರುವ ಮಾತುಗಳು ಬಹಳ ಮುಖ್ಯವಾಗುತ್ತದೆ. ಈ ವಾರದ ಎಪಿಸೋಡಿನಲ್ಲಂತೂ ಸದಸ್ಯರ ಬಾಯಲ್ಲಿ ಬಂದ ಮಾತುಗಳು ಅತ್ಯುತ್ತಮವಾಗಿತ್ತು. ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತ ಸ್ಪರ್ಧೆಯೇ ಇತ್ತು.

ಇಡೀ ವಾರ ಸದಸ್ಯರು ರೀತಿ ಕಿಚ್ಚನಿಗೂ ಬೇಸರ ತರಿಸಿದೆ. ಅದಕ್ಕೆ ಖಡಕ್ ಆಗಿಯೇ ಸುದೀಪ್ ಎಲ್ಲರಿಗೂ, ಈ ಟೀಂ ಕಡೆಯಿಂದ ಒಬ್ಬರು ಫೈನಲಿಸ್ಟ್ ರೆಡಿಯಾಗಿದ್ದಾರೆ. ಇನ್ನು ಆ ಟೀಂನಿಂದ ಒಬ್ಬರನ್ನ ರೆಡಿ ಮಾಡಿಬಿಡಿ. ಹದಿನೆಂಟು ವಾರದ ಬಿಗ್ ಬಾಸ್ ಅನ್ನ ನಾಲ್ಕೆ ವಾರದಲ್ಲಿ ಮುಗಿಸಿಬಿಡೋಣಾ ಎಂದಿದ್ದಾರೆ. ಈ ರೀತಿಯ ಮಾತುಕತೆ ಮುಗಿದ ಮೇಲೆ ಸುದೀಪ್ ನಮ್ರತಾ ಹಾಗೂ ಸಂಗೀತಾ ಜಗಳ ಹಾಗೂ ವಿನಯ್ ಆಡಿದ ಮಾತಿನ ಬಗ್ಗೆ ಅವರಿಬ್ಬರ ಬಳಿಯೇ ಕ್ಲಾರಿಟಿ ಕೇಳಿದ್ದಾರೆ.

ವಿನಯ್ ಈ ವಾರ ಬಳಸಿದ ಪದಗಳು ಒಂದೆರಡಲ್ಲ. ಬಳೆಗಳ ರಾಜ, ಗಂಡಸರ ಥರ ಆಡು, ಬಾರೋ ಗಂಡಸು ಬಾ ಹೀಗೆ ಹಲವು ಪದಗಳನ್ನು ಕಾರ್ತೀಕ್ ಮೇಲೆ ಪ್ರಯೋಗ ಮಾಡಿದರು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆಗಿದ್ದರು. ವಿನಯ್ ಬಳಿಯೇ ಅದಕ್ಕೆ ಕ್ಲಾರಿಟಿಯನ್ನು ಪಡೆದುಕೊಂಡರು. ಆದರೆ ವಿನಯ್ ಆಡಿದ ಮಾತಿಗೆ ಸ್ಪಷ್ಟನೆ ಕೊಡುವುದಕ್ಕೆ ರೆಡಿ ಇಲ್ಲ. ಆ ಮಾತುಗಳಿಗೆ ಅರ್ಥ ನೀಡುವುದರಲ್ಲಿಯೇ ಸೋತರು. ಅವರ ಅಕ್ಕ ಪಕ್ಕ ಇದ್ದ ಸ್ನೇಹಿತ್ ಹಾಗೂ ನಮ್ರತಾ ಬಳಿಯೂ ಕೇಳಿ, ಅದರ ನಿಜವಾದ ಅರ್ಥವನ್ನು ತಿಳಿಸಿ, ಅವರಿಬ್ಬರಿಗೂ ತಪ್ಪಿನ ಅರಿವು ಮೂಡಿಸಿದರು.

ವಾರದ ಕೊನೆಯಲ್ಲಿ ಇಡೀ ವಾರ ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಕಿಚ್ಚನ ಚಪ್ಪಾಳೆಗಾಗಿಯೇ ಸಾಕಷ್ಟು ಎಫರ್ಟ್ ಹಾಕಲಾಗುತ್ತದೆ. ಈ ವಾರ ಕಿಚ್ಚನ ಚಪ್ಪಾಳೆ ಒಂದು ಸ್ಪೆಷಲ್ ಆಗಿತ್ತು. ಅದುವೇ ವಿನಯ್ ಗೆ ಆ ಗಿಫ್ಟ್ ಸಿಕ್ಕಿದೆ. ಸಂಗೀತಾ ಅವರ ಬಳೆ ಇದ್ದಂತ ಫೋಟೋ ಬಂದಿದೆ. ಆ ಬಳೆಗಳ ಕೈಗೆ ಕಿಚ್ಚನ ಚಪ್ಪಾಳೆ ಹೋಗಿದೆ. ಅಂದರೆ ಸಂಗೀತಾಗೆ ಆ ಚಪ್ಪಾಳೆ ಸಿಕ್ಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!