Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಾಪ್ ಸೇರಿದಂತೆ ಎಲ್ಲರೂ ಸೇಫ್.. ಹೊರಗೆ ಬರ್ತಾರ ಸ್ನೇಕ್ ಶ್ಯಾಮ್..?

Facebook
Twitter
Telegram
WhatsApp

 

ಬಿಗ್ ಬಾಸ್ ಸೀಸನ್ 10 ಶುರುವಾಗಿ ಒಂದು ವಾರ ಕಳೆದಿದೆ. ಮೊದಲ ಪಂಚಾಯ್ತಿ ಶುರುವಾಗಿದೆ. ಎಲ್ಲಾ ಸೀಸನ್ ನಲ್ಲೂ ಕಿಚ್ಚನ ಪಂಚಾಯ್ತಿಗೆ ಕುತೂಹಲದಿಂದಾನೇ ಕಾಯುತ್ತಾರೆ. ಆದರೆ ಈ ಸೀಸನ್ ನಲ್ಲಿ ಆ ಕಾಯುವಿಕೆ ಹೆಚ್ಚಾಗಿತ್ತು. ಯಾಕಂದ್ರೆ ಒಳಗಿದ್ದ ಜನ ಅಷ್ಟು ಕೆಳಮಟ್ಟದಲ್ಲಿ ನಡೆದುಕೊಂಡಿದ್ದರು. ಸಿಕ್ಕ ಪ್ರತಾಪನನ್ನು ಹಿಡಿದು ಹಿಡಿದು ಜಗ್ಗುತ್ತಿದ್ದರು. ಕಡೆಗೂ ಪಾಪ ಆ ಪ್ರತಾಪನ ತಾಳ್ಮೆಯ ಕಟ್ಟೆ ಒಡೆದು ಅಳುವಿಗೂ ಕಾರಣವಾಯ್ತು. ಈ ಎಲ್ಲಾ ಬೆಳವಣಿಗೆಯಿಂದ ಬಿಗ್ ಬಾಸ್ ನೋಡುತ್ತಿದ್ದವರು ಆದಷ್ಟು ಬೇಗ ಕಿಚ್ಚನ ವಾರದ ಕಥೆ ಬರಲಿ ಎಂದೇ ಕಾದಿದ್ದಾರೆ.

ಈಗಾಗಲೇ ನಾಮಿನೇಷನ್ ಲೀಸ್ಟ್ ನಲ್ಲಿ ಎಂಟು ಜನ ಇದ್ದರು. ಆ ಎಂಟು ಜನರಲ್ಲಿ ಮೊದಲ ದಿನ ಅಂದ್ರೆ ಶನಿವಾರ ಮೂವರನ್ನು ಸೇವ್ ಮಾಡಲಾಗಿದೆ. ಭಾನುವಾರ ಇನ್ನುಳಿದ ನಾಲ್ವರನ್ನು ಸೇವ್ ಮಾಡಿ, ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಒಂದೇ ವಾರಕ್ಕೆ ಮನೆಯಲ್ಲಿರುವ ಒಬ್ಬರು ತನ್ನ ಆಟವನ್ನು ಮುಗಿಸಲಿದ್ದಾರೆ.

ಡ್ರೋನ್ ಪ್ರತಾಪ್ ಈಗಾಗಲೇ ಎಲ್ಲರ ಜೊತೆಗೂ ಬೆರೆಯುತ್ತಿದ್ದಾರೆ. ಕಿಚ್ಚನ ಕ್ಲಾಸ್ ನಂತರ ಮನೆಯವರೆಲ್ಲ ಸರಿಯಾಗಲಿದ್ದಾರೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಈ ಬೆನ್ನಲ್ಲೇ ಮನೆಯಿಂದ ಹೊರ ಬರುವುದು ಯಾರು ಎಂಬ ಪ್ರಶ್ನೆಗೆ ಮೂಲಗಳ ಪ್ರಕಾರ ಸ್ನೇಕ್ ಶ್ಯಾಮ್ ಎನ್ನಲಾಗ್ತಾ ಇದೆ. ಸ್ನೇಕ್ ಶ್ಯಾಮ್, ವಯಸ್ಸಿನ ವಿಚಾರ ಅಷ್ಟಾಗಿ ಬಾರದೆ ಹೋದರು, ಆಟಗಳಲ್ಲಿ ಅವರ ಬೆಂಬಲ ಸಿಗುತ್ತಿಲ್ಲ ಎಂಬುದು ಮನೆಯವರ ಮಾತು. ಹೀಗಾಗಿ ಸ್ನೇಕ್ ಶ್ಯಾಮ್ ಹೊರಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಸಂಡೆ ವಿತ್ ಸುದೀಪದಲ್ಲಿ ಗೊತ್ತಾಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!