Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಕಿಬಾಯ್ ಬಗ್ಗೆ ಹಗುರವಾಗಿ‌ ಮಾತನಾಡಿದ ರವಿತೇಜ : ಕ್ಷಮೆ ಕೇಳುವಂತೆ ಆಗ್ರಹಿಸಿದ ಯಶ್ ಫ್ಯಾನ್ಸ್

Facebook
Twitter
Telegram
WhatsApp

 

ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿ ಬರೆದ ದಾಖಲೆ ಅಷ್ಟಿಷ್ಟಲ್ಲ. ಹೊಂಬಾಳೆ ಸಂಸ್ಥೆ ದೊಡ್ಡ ಮಟ್ಟದಲ್ಲಿಯೇ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಎಲ್ಲಾ ಭಾಷೆಯ ಸಿನಿಮಾರಂಗ ತಿರುಗಿ ನೋಡಿತ್ತು. ಯಶ್ ಹಾಕಿದ ಎಫರ್ಟ್ ಗೆ ಎಲ್ಲರೂ ಶಬ್ಬಾಶ್ ಗಿರಿ ಕೊಟ್ಟರು. ಆರೇಳು ವರ್ಷ ಯಶ್ ಕೆಜಿಎಫ್ ಗಾಗಿ ತಮ್ಮ ಶ್ರಮವನ್ನು ಮುಡಿಪಾಗಿಟ್ಟರು. ಆದರೆ ತೆಲುಗು ನಟ ರವಿತೇಜ ಅವರು ಕೆಜಿಎಫ್ ಹಾಗೂ ಯಶ್ ಬಗ್ಗೆ ಉಡಾಫೆಯ ಮಾತುಗಳನ್ನ ಆಡಿದ್ದಾರೆ. ಇದು ಯಶ್ ಫ್ಯಾನ್ಸ್ ಕಣ್ಣು ಕೆಂಪಾಗುವಂತೆ ಮಾಡಿದೆ.

ಸಂದರ್ಶನವೊಂದರಲ್ಲಿ ರ‌್ಯಾಪಿಡ್ ಫೈಯರ್ ಗೆ ಉತ್ತರಿಸಿದ ರವಿತೇಜ ಉಡಾಫೆಯ ಮಾತುಗಳನ್ನಾಡಿದ್ದಾರೆ. ರಾಮ್ ಚರಣ್, ರಾಜಮೌಳಿ ಅವರ ಬಗೆಗೆಲ್ಲ ಒಳ್ಳೆಯ ಮಾತುಗಳನ್ನ ಆಡಿದ್ದಾರೆ. ಅದೇ ಸಮಯಕ್ಕೆ ಯಶ್ ಎಂದು ಕೇಳಿದಾಗ, ನಾನು ಅವರ ಕೆಜಿಎಫ್ ಸಿನಿಮಾ ಮಾತ್ರ ನೋಡಿದ್ದೀನಿ. ಕೆಜಿಎಫ್ ಸಿನಿಮಾ ಸಿಗುವುದಕ್ಕೆ ಅವರು ಅದೃಷ್ಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮಾತು ಯಶ್ ಫ್ಯಾನ್ಸ್ ಅನ್ನು ಕೆರಳಿಸಿದೆ.

ಕೆಜಿಎಫ್ ಸಿಕ್ಕಿದ್ದು ಯಶ್ ಅದೃಷ್ಟದಿಂದಾನ..? ಯಾಕೆ ಯಶ್ ಆರು ವರ್ಷ ತನು ಮನ ಅರ್ಪಿಸಲಿಲ್ವಾ. ಯಾಕೆ ಯಶ್ ಪರಿಶ್ರಮಕ್ಕೆ ಬೆಲೆ ಇಲ್ವಾ ಎಂದೇ ಫ್ಯಾನ್ಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರವಿತೇಜ ಅವರು ಕ್ಷಮೆ ಕೇಳಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಷ್ಟೆ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇದೆ. ಇನ್ನು ಕೆಲವರು ಎಚ್ಚರಿಕೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ‘ಟೈಗರ್ ನಾಗೇಶ್ವರ್’ ಕಥೆ ಏನಾಗುತ್ತೆ ಅಂತ ನೋಡುತ್ತಾ ಇರಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

ರೋಟರಿ ಕ್ಲಬ್‍ನಿಂದ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಿ : ರೊ.ಕನಕರಾಜ್

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ‌ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 19  : ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಕೊಡಬೇಕೆಂದು

error: Content is protected !!