ಶ್ರೀ ಪಾಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಕೃಷ್ಣ ಮತ್ತು ರುಕ್ಮಿಣಿ ವೇಷಧಾರಿ ಪುಟಾಣಿಗಳ ಕಲರವ

1 Min Read

 

ವರದಿ ಮತ್ತು ಫೋಟೋ ಕೃಪೆ

ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಸೆ. 06) : ನಗರದ ಶ್ರೀ ಪಾಶ್ವನಾಥ ವಿದ್ಯಾ ಸಂಸ್ಥೆಯ 50 ನೇ ವರ್ಷದ ಅಂಗವಾಗಿ ಬುಧವಾರ ಶ್ರೀ ಕೃಷ್ಣಾಷ್ಠಮಿಯ ದಿನದಂದು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರುಕ್ಮಿಣಿಯ ವೇಷವನ್ನು ಹಾಕಲಾಗಿತ್ತು.

ಕೃಷ್ಣಾ ಮತ್ತು ರುಕ್ಮೀಣಿ ವೇಷವನ್ನು ಧರಿಸಿದ ಶಾಲಾ ಮಕ್ಕಳು ಶಾಲೆಯ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ಒಂದು ಸುತ್ತು ಮೆರವಣಿಗೆಯನ್ನು ನಡೆಸಿ ನೋಡುಗರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಶ್ರೀ ಪಾಶ್ವನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಬಾಬು ಲಾಲ್ ಜೀ, ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನ, ಕಾರ್ಯದರ್ಶಿ ಸುರೇಶ್ ಕುಮಾರ್ ನಿರ್ದೇಶಕರುಗಳಾದ ಮಹಾವೀರ್, ಮುಕೇಶ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ, ಶಿಕ್ಷಕರು, ಭೋದಕೇತರ ವರ್ಗದವರು, ಪೋಷಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *