Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿರ್ಮಾಪಕರ ಸಂಘದ ವಿರುದ್ಧ ಜಾಕ್ ಮಂಜು ಅಸಮಾಧಾನ..!

---Advertisement---

 

 

ಬೆಂಗಳೂರು: ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕರ ನಡುವಿನ ಸಮರ ದಿನೇ ದಿನೇ ಬೆಳೆಯಿತ್ತಲೇ ಇದೆ. ಮೊದಲಿಗೆ ನಿರ್ಮಾಪಕ ಕುಮಾರ್ ಅವರು ಆರೋಪ ಮಾಡಿದ್ದರು. ಬಳಿಕ ರೆಹಮಾನ್ ಅವರು ನನಗು ಹಣ ಕೊಡಬೇಕು ಅಂತ ಬಂದರು. ಇದೆಲ್ಲವನ್ನು ನೋಡಿದ ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು. ಆರೋಪ ಮಾಡಿದ ನಿರ್ಮಾಪಕರಿಗೆ ಧಿಕ್ಕಾರ ಕೂಗಿ ಕ್ಷಮೆ ಕೇಳುವಂತೆ ಹೇಳಿದರು. ಇದೀಗ ಸುದೀಪ್ ಅವರ ಆಪ್ತ ಜಾಜ್ ಮಂಜು ಮತ್ತೆ ಬೇಸರ ಹೊರ ಹಾಕಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾದಿಂದ ನನಗೆ ಯಾವುದೇ ನಷ್ಟವಾಗಿಲ್ಲ. ಯಾವುದೇ ಸಂಭಾವನೆಯನ್ನೇ ಕಿಚ್ಚ ಸುದೀಪ್ ಅವರು ಸ್ನೇಹಕ್ಕೋಸ್ಕರ ಮಾಡಿದ್ದಾರೆ. ಸಾವಿರಾರು ಸಲ ಕಾಲ್ ಮಾಡಿದರು ರಿಸೀವ್ ಮಾಡದ ನಾನು ಅವರನ್ನೇ ಹುಡುಕಿಕೊಂಡು ಹೋಗಿ, ಹೀಗೆ ನಷ್ಟ ಆಯ್ತು ಅಂತ ಹೇಳಿದ್ದೀನಾ..? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ ಮತ್ತು ರೆಹಮಾನ್ ನಡುವೆ ಅಂತ ಸಂಬಂಧವೇನಿದೆ ಎಂದು ರೆಹಮಾನ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ರೆಹಮಾನ್ ಅವರ ಹೇಳಿಕೆಗಳು ಹಾಗೂ ಅದನ್ನ ಪ್ರೋತ್ಸಾಹಿಸಿದ ನಿರ್ಮಾಪಕ ಸಂಘದ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಜಾಕ್ ಮಂಜು, ಇದು ನನ್ನ ಮತ್ತು ಸಹೋದರ ಸಮನಾದ ಸುದೀಪ್ ಅವರ ನಡುವೆ ತಂದಿಡುವ ಪ್ರಯತ್ನ. ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ. ಸುದೀಪ್ ಮತ್ತು ನಿರ್ಮಾಪಕರ ನಡುವಿನ ಬೆಳವಣಿಗೆಯಲ್ಲಿ ನಿರ್ಮಾಪಕರ ಸಂಘ ಮಲತಾಯಿ ಧೋರಣೆ ಮಾಡ್ತಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...