ಇದ್ದಕ್ಕಿದ್ದ ಹಾಗೇ ಡಿಸಿಎಂ ಶಿವಕುಮಾರ್ ರನ್ನು ಭೇಟಿಯಾದ್ರೂ ರೇಣುಕಾಚಾರ್ಯ..!

1 Min Read

 

ಬೆಂಗಳೂರು: ಈ ಬಾರಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರೆ ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾರೆ. ಆದರೆ ಇದು ಹಳೆಯ ಸುದ್ದಿಯಾದರೂ ಇಂದು ಶಾಕಿಂಗ್ ಎನಿಸುವಂತ ಬೆಳವಣಿಗೆ ನಡೆದಿದೆ. ಅದುವೇ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಸದಾಶಿವನಗರದ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ರೇಣುಕಾಚಾರ್ಯ ಮಾತನಾಡಿದ್ದರೆ. ಹೂಗುಚ್ಛ ನೀಡಿ, ಕುಶಲೋಪರಿ ವಿಚಾರಿಸಿದ್ದಾರೆ. ಸದ್ಯದ ರಾಜಕೀಯ ವಿಚಾರಗಳು ಕೂಡ ಚರ್ಚೆಯಾಗಿದೆ. ಇಬ್ಬರು ಒಂದಷ್ಟು ಸಮಯ ಮಾತುಕಥೆ ನಡೆಸಿದ್ದಾರೆ.

ಆದರೆ ರೇಣುಕಾಚಾರ್ಯ ಅವರು ಇದ್ದಕ್ಕಿದ್ದ ಹಾಗೇ ಡಿಸಿಎಂ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇನ್ನು ಆ ಭೇಟಿ ನಿಗೂಢವಾಗಿಯೇ ಇದೆ. ಎಂಪಿ ರೇಣುಕಾಚಾರ್ಯ ಅವರು ಈ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲು ಕಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *