Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಳೆಹಣ್ಣು ಕೊಟ್ಟ ತಾತ ಇನ್ನಿಲ್ಲ.. ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ ಕೋತಿ.. ವಿಜಯನಗರದಲ್ಲಿ ಮನಕಲುಕುವ ಘಟನೆ..!

Facebook
Twitter
Telegram
WhatsApp

ವಿಜಯನಗರ: ಮನುಷ್ಯನಿಗಿಂತ ಪ್ರಾಣಿಗಳೇ ಮೇಲೂ ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಮನುಷ್ಯನಿಗೆ ನೀನೆ ಎಷ್ಟೇ ಉಪಕಾರ ಮಾಡಿದರೂ ಅದನ್ನ ಯಾವಾಗಲಾದರೂ ಒಮ್ಮೆ ಮರೆತು ಬಿಡುತ್ತಾರೆ. ಆದರೆ ಪ್ರಾಣಿಗಳು ಹಂಗಲ್ಲ. ಯಾರೋ ಒಬ್ಬರು ಹೊಟ್ಟೆಗೆ ಊಟ ಹಾಕಿದರೂ ಎಂದರೆ, ಅವರನ್ನು ಯಾವತ್ತಿಗೂ ಮರೆಯುವುದಿಲ್ಲ. ಅವರ ಹಿಂದೆ‌ಮುಂದೆಯೇ ಓಡಾಡುತ್ತವೆ. ನಿಶ್ವಲ್ಮಶ ಪ್ರೀತಿಯಷ್ಟೇ ಪ್ರಾಣಿಗಳಿಗೆ ಗೊತ್ತಾಗುವುದು.

ಈಗ ಪ್ರಾಣಿಯ ಮತ್ತೊಂದು ಪ್ರೀತಿ ಅನಾವರಣವಾಗಿದೆ. ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಕೋತಿ ನಡೆದುಕೊಂಡ ರೀತಿಗೆ ಎಲ್ಲರಿಗೂ ಕಣ್ತುಂಬಿ ಬಂದಿದೆ. ಪ್ರತಿನಿತ್ಯ ಕಾಳಜಿ ತೋರಿಸುತ್ತಿದ್ದ ತಾತನನ್ನು ಕಳೆದುಕೊಂಡ ಕೋತಿ ಕಣ್ಣೀರು ಹಾಕುತ್ತಾ ಕೂತಿದೆ.

ಹಳೆ ಹಗರಿಬೊಮ್ಮನಹಳ್ಳಿಯಲ್ಲಿ 88 ವರ್ಷದ ಪರಶುರಾಮ್ ಷಾ ಎಂಬ ವೃದ್ಧ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರೆಲ್ಲಾ ತಾತನನ್ನು ಕಳೆದುಕೊಂಡ ದುಃಖದಲ್ಲಿದ್ದರು. ಈ ವೇಳೆ ಅಲ್ಲಿಗೆ ಬಂದ ಕೋತಿ, ತಾತನ ಹಣೆಗೆ ಮುತ್ತಿಟ್ಟು, ಅಂತಿಮ ವಿದಾಯ ಹೇಳಿದೆ. ಕಳೆದ ಎರಡು ತಿಂಗಳಿನಿಂದ ಪರಶುರಾಮ್, ಈ ಕೋತಿಗೆ ಪ್ರತಿನಿತ್ಯ ಬಾಳೆ ಹಣ್ಣು ನೀಡುತ್ತಿದ್ದರು. ಹುಟ್ಟುಹಬ್ಬವಾದ ಮರುದಿನವೇ ಪರಶುರಾಮ್ ನಿಧನರಾಗಿದ್ದಾರೆ. ಅದರಲ್ಲೂ ಶ್ರೀರಾಮನವಮಿಯಂದೇ ನಿಧನರಾಗಿದ್ದರು. ಈ ಫೋಟೋ, ವಿಡಿಯೋ ವೈರಲ್ ಆಗಿದೆ. ಕೋತಿಯ ಪ್ರೀತಿ ಕಂಡು ಜನ ಕೂಡ ಭಾವುಕರಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!