Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿರಲಿಲ್ಲ : ಕಂಬಳ ಗಲಾಟೆಗೆ ಸಾನ್ಯಾ ಸ್ಪಷ್ಟನೆ..!

Facebook
Twitter
Telegram
WhatsApp

ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೆ ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಾನ್ಯಾ ಅಯ್ಯರ್, ಇತ್ತಿಚೆಗೆ ಪುತ್ತೂರಿಗೆ ಭೇಟಿ ನೀಡಿದ್ದರು. ಅದು ಕಂಬಳಕ್ಕೆ ಸಾನ್ಯಾ ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು. ಅಲ್ಲಿ ಸಾನ್ಯಾ ಅಯ್ಯರ್ ಜೊತೆಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ, ಸಾನ್ಯಾ ಅವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಸುದ್ದಿಯೆಲ್ಲಾ ಹರಡಿತ್ತು. ಇದೀಗ ಆ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.

ನಾನು ಕಂಬಳಕ್ಕೆ ಸ್ನೇಹಿತೆಯರ ಜೊತೆಗೆ ಹೋಗಿದ್ದೆ. ಆಗ ಅಲ್ಲಿ ಯಾರೋ ನಶೆಯಲ್ಲಿದ್ದ ಹುಡುಗ ನನ್ನ ಸ್ನೇಹಿತೆಯರ ಮೇಲೆ ಬಿದ್ದ. ನಾವೂ ಜೋರಾಗಿ ಕಿರುಚಿದೆವು. ಅಲ್ಲಿದ್ದವರೆಲ್ಲಾ ಓಡಿ ಬಂದರು. ಆದರೆ ಬಿದ್ದ ಹುಡುಗ ಯಾರು..? ಎಲ್ಲಿ ಹೋದ..? ಏನು ಗೊತ್ತಿಲ್ಲ. ಈಗ ಸುದ್ದಿಯಾಗಿರುವಂತೆ ಅವನು ನನಗೆ ಕಪಾಳಕ್ಕೆ ಹೊಡೆದ, ನಾನು ಅವನ ಕಪಾಳಕ್ಕೆ ಹೊಡೆದ ಎಂಬ ಯಾವ ಸನ್ನಿವೇಶವೂ ನಡೆದಿಲ್ಲ ಎಂದಿದ್ದಾರೆ.

ಇನ್ನು ಮದ್ಯಪಾನ ಮಾಡಿ ಹೋಗಿದ್ದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ನಾನು ಬಾಂಬೆಯಲ್ಲಜ ನಡೆಯುವ ಶೂಟಿಂಗ್ ಒಂದರಲ್ಲಿ ಭಾಗಿಯಾಗಬೇಕು. ಅದಕ್ಕೆ ಜೀರೋ ಶುಗರ್ ಡಯೆಟ್ ಮಾಡುತ್ತಾ ಇದ್ದೀನಿ. ನಾನು ಯಾವುದೇ ಕಾರಣಕ್ಕೂ ಮದ್ಯ ಸೇವನೆ ಮಾಡಿಲ್ಲ. ಧೂಮಪಾನ, ಮದ್ಯಪಾನ ಏನನ್ನು ನಾನು ಮಾಡುವುದಿಲ್ಲ. ನಾನು ಮಾಲೆ ಧರಿಸಿದ್ದೇನೆ. ಅದೆಲ್ಲ ಮಾಡಲು ಸಾಧ್ಯವಾ..? ಇನ್ನು ಅಲ್ಲಿ ಇದ್ದದ್ದೆಲ್ಲ ದೇವಸ್ಥಾನಗಳು. ಮದ್ಯಪಾನ ಮಾಡಿ ಅಲ್ಲಿಗೆ ಹೋಗುತ್ತೇವಾ..? ಕಂಬಳ ನೋಡುವುದಕ್ಕೆ ಹೋಗಿದ್ದು ಎಂಜಾಯ್ ಮಾಡುವುದಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!