ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೆ ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಾನ್ಯಾ ಅಯ್ಯರ್, ಇತ್ತಿಚೆಗೆ ಪುತ್ತೂರಿಗೆ ಭೇಟಿ ನೀಡಿದ್ದರು. ಅದು ಕಂಬಳಕ್ಕೆ ಸಾನ್ಯಾ ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು. ಅಲ್ಲಿ ಸಾನ್ಯಾ ಅಯ್ಯರ್ ಜೊತೆಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ, ಸಾನ್ಯಾ ಅವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಸುದ್ದಿಯೆಲ್ಲಾ ಹರಡಿತ್ತು. ಇದೀಗ ಆ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಕಂಬಳಕ್ಕೆ ಸ್ನೇಹಿತೆಯರ ಜೊತೆಗೆ ಹೋಗಿದ್ದೆ. ಆಗ ಅಲ್ಲಿ ಯಾರೋ ನಶೆಯಲ್ಲಿದ್ದ ಹುಡುಗ ನನ್ನ ಸ್ನೇಹಿತೆಯರ ಮೇಲೆ ಬಿದ್ದ. ನಾವೂ ಜೋರಾಗಿ ಕಿರುಚಿದೆವು. ಅಲ್ಲಿದ್ದವರೆಲ್ಲಾ ಓಡಿ ಬಂದರು. ಆದರೆ ಬಿದ್ದ ಹುಡುಗ ಯಾರು..? ಎಲ್ಲಿ ಹೋದ..? ಏನು ಗೊತ್ತಿಲ್ಲ. ಈಗ ಸುದ್ದಿಯಾಗಿರುವಂತೆ ಅವನು ನನಗೆ ಕಪಾಳಕ್ಕೆ ಹೊಡೆದ, ನಾನು ಅವನ ಕಪಾಳಕ್ಕೆ ಹೊಡೆದ ಎಂಬ ಯಾವ ಸನ್ನಿವೇಶವೂ ನಡೆದಿಲ್ಲ ಎಂದಿದ್ದಾರೆ.
ಇನ್ನು ಮದ್ಯಪಾನ ಮಾಡಿ ಹೋಗಿದ್ದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ನಾನು ಬಾಂಬೆಯಲ್ಲಜ ನಡೆಯುವ ಶೂಟಿಂಗ್ ಒಂದರಲ್ಲಿ ಭಾಗಿಯಾಗಬೇಕು. ಅದಕ್ಕೆ ಜೀರೋ ಶುಗರ್ ಡಯೆಟ್ ಮಾಡುತ್ತಾ ಇದ್ದೀನಿ. ನಾನು ಯಾವುದೇ ಕಾರಣಕ್ಕೂ ಮದ್ಯ ಸೇವನೆ ಮಾಡಿಲ್ಲ. ಧೂಮಪಾನ, ಮದ್ಯಪಾನ ಏನನ್ನು ನಾನು ಮಾಡುವುದಿಲ್ಲ. ನಾನು ಮಾಲೆ ಧರಿಸಿದ್ದೇನೆ. ಅದೆಲ್ಲ ಮಾಡಲು ಸಾಧ್ಯವಾ..? ಇನ್ನು ಅಲ್ಲಿ ಇದ್ದದ್ದೆಲ್ಲ ದೇವಸ್ಥಾನಗಳು. ಮದ್ಯಪಾನ ಮಾಡಿ ಅಲ್ಲಿಗೆ ಹೋಗುತ್ತೇವಾ..? ಕಂಬಳ ನೋಡುವುದಕ್ಕೆ ಹೋಗಿದ್ದು ಎಂಜಾಯ್ ಮಾಡುವುದಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್