in ,

ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿರಲಿಲ್ಲ : ಕಂಬಳ ಗಲಾಟೆಗೆ ಸಾನ್ಯಾ ಸ್ಪಷ್ಟನೆ..!

suddione whatsapp group join

ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೆ ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಾನ್ಯಾ ಅಯ್ಯರ್, ಇತ್ತಿಚೆಗೆ ಪುತ್ತೂರಿಗೆ ಭೇಟಿ ನೀಡಿದ್ದರು. ಅದು ಕಂಬಳಕ್ಕೆ ಸಾನ್ಯಾ ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು. ಅಲ್ಲಿ ಸಾನ್ಯಾ ಅಯ್ಯರ್ ಜೊತೆಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ, ಸಾನ್ಯಾ ಅವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಸುದ್ದಿಯೆಲ್ಲಾ ಹರಡಿತ್ತು. ಇದೀಗ ಆ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.

ನಾನು ಕಂಬಳಕ್ಕೆ ಸ್ನೇಹಿತೆಯರ ಜೊತೆಗೆ ಹೋಗಿದ್ದೆ. ಆಗ ಅಲ್ಲಿ ಯಾರೋ ನಶೆಯಲ್ಲಿದ್ದ ಹುಡುಗ ನನ್ನ ಸ್ನೇಹಿತೆಯರ ಮೇಲೆ ಬಿದ್ದ. ನಾವೂ ಜೋರಾಗಿ ಕಿರುಚಿದೆವು. ಅಲ್ಲಿದ್ದವರೆಲ್ಲಾ ಓಡಿ ಬಂದರು. ಆದರೆ ಬಿದ್ದ ಹುಡುಗ ಯಾರು..? ಎಲ್ಲಿ ಹೋದ..? ಏನು ಗೊತ್ತಿಲ್ಲ. ಈಗ ಸುದ್ದಿಯಾಗಿರುವಂತೆ ಅವನು ನನಗೆ ಕಪಾಳಕ್ಕೆ ಹೊಡೆದ, ನಾನು ಅವನ ಕಪಾಳಕ್ಕೆ ಹೊಡೆದ ಎಂಬ ಯಾವ ಸನ್ನಿವೇಶವೂ ನಡೆದಿಲ್ಲ ಎಂದಿದ್ದಾರೆ.

ಇನ್ನು ಮದ್ಯಪಾನ ಮಾಡಿ ಹೋಗಿದ್ದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ನಾನು ಬಾಂಬೆಯಲ್ಲಜ ನಡೆಯುವ ಶೂಟಿಂಗ್ ಒಂದರಲ್ಲಿ ಭಾಗಿಯಾಗಬೇಕು. ಅದಕ್ಕೆ ಜೀರೋ ಶುಗರ್ ಡಯೆಟ್ ಮಾಡುತ್ತಾ ಇದ್ದೀನಿ. ನಾನು ಯಾವುದೇ ಕಾರಣಕ್ಕೂ ಮದ್ಯ ಸೇವನೆ ಮಾಡಿಲ್ಲ. ಧೂಮಪಾನ, ಮದ್ಯಪಾನ ಏನನ್ನು ನಾನು ಮಾಡುವುದಿಲ್ಲ. ನಾನು ಮಾಲೆ ಧರಿಸಿದ್ದೇನೆ. ಅದೆಲ್ಲ ಮಾಡಲು ಸಾಧ್ಯವಾ..? ಇನ್ನು ಅಲ್ಲಿ ಇದ್ದದ್ದೆಲ್ಲ ದೇವಸ್ಥಾನಗಳು. ಮದ್ಯಪಾನ ಮಾಡಿ ಅಲ್ಲಿಗೆ ಹೋಗುತ್ತೇವಾ..? ಕಂಬಳ ನೋಡುವುದಕ್ಕೆ ಹೋಗಿದ್ದು ಎಂಜಾಯ್ ಮಾಡುವುದಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

‘ಕಬ್ಜ’ ಮಾಸ್ ಲಿರಿಕಲ್ ಸಾಂಗ್ ರಿಲೀಸ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಆರ್ ಚಂದ್ರು..!

ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ಜಯ