Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಥೈರಾಯ್ಡ್ ಇರುವವರು.. ಕಡಿಮೆ ತೂಕ ಇರುವವರು ಹೂಕೋಸು ತಿನ್ನಬೇಡಿ..!

Facebook
Twitter
Telegram
WhatsApp

 

ಕೆಲವೊಂದು ಆಹಾರ ಪದಾರ್ಥಗಳನ್ನು ಕೆಲವೊಬ್ಬರು ತಿನ್ನಬಾರದು. ಆ ಪದಾರ್ಥಗಳಿಂದ ಅ‌ನಾರೋಗ್ಯ ಹೆಚ್ಚಾವುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಕೋಲ್ಡ್ ದೇಹ ಹೊಂದಿರುವವರು ಕೋಲ್ಡ್ ಪದಾರ್ಥಗಳಿಂದ ದೂರವೇ ಉಳಿಯಬೇಕಾಗುತ್ತದೆ. ಕೆಲವೊಮ್ಮೆ ನಾಲಿಗೆಯ ರುಚಿಯಿಂದ ದೇಹದ ವಾತಾವರಣಕ್ಕೆ ಮೀರಿಯೂ ತಿಂದು ಬಿಡುತ್ತೇವೆ. ಅದೇ ನಮ್ಮ ದೇಹಕ್ಕೆ ಒಂದಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಈ ರೀತಿಯ ಆಹಾರ ಕ್ರಮದಲ್ಲಿ ಹೂ ಕೋಸ್ ಕೂಡ ಒಂದಾಗಿದೆ. ಹೂ ಕೋಸು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಿಂದ ಮಾಡಿರುವ ಮಂಚೂರಿಯನ್, ಅದರಿಂದ ಮಾಡುವ ಕುರ್ಮಾ, ಅದರಿಂದ ಮಾಡುವ ಸಾಗು ಅಬ್ಬಬ್ಬಾ ಒಂದಾ ಎರಡಾ, ಹಲವು ಬಗೆಯ ಆಹಾರ ಪದಾರ್ಥಗಳನ್ನು ಹೂಕೋಸಿನಿಂದ ಮಾಡಬಹುದು. ಜೊತೆಗೆ ಅಷ್ಟೇ ರುಚಿಕಟ್ಟಾಗಿರುತ್ತದೆ. ಹೀಗಾಗಿ ನಾಲಿಗೆ ಅದನ್ನು ಕರೆಯುತ್ತಲೆ ಇರುತ್ತದೆ.

ಆದರೆ ಇದರಲ್ಲಿ ರಾಫಿನೋಸ್ ಎಂಬ ಹಾನಿಕಾರಕ ವಸ್ತುವನ್ನು ಅಡಗಿಸಿಕೊಂಡಿರುತ್ತದೆ. ಇದು ಒಂದು ರೀತಿಯ ಕಾಬ್ರೋಹೈಡ್ರೇಡ್ ಆಗಿರುತ್ತದೆ. ಈ ರೀತಿಯ ತರಕಾರಿಯನ್ನು ಪ್ರತಿ ಬಾರಿ ಸೇವಿಸಿದಾಗ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಹಾದು ಹೋಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಕೂಡ ತುಂಬಬಹುದಾಗಿದೆ.

ಇನ್ನು ಥೈರಾಯ್ಡ್ ಇರುವಂತವರು ಈ ಹೂಕೋಸನ್ನು ಹೆಚ್ಚಿಗೆ ತಿನ್ನ ಬಾರದು. ಈ ಹೂಕೋಸಿನ ಸೇವನೆ T-3 & T-4 ಹೆಚ್ಚು ಮಾಡುವ ಸಾಧ್ಯತೆ ಇದೆ ಹೀಗಾಗಿ ಹೂಕೋಸಿನಿಂದ ದೂರವಿರಬೇಕಾಗುತ್ತದೆ.

ಹಾಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ಹೂಕೋಸು ತಿನ್ನದೆ ಇರುವುದೇ ಉತ್ತಮ. ಇದನ್ನು ತಿನ್ನುವುದರಿಂದ ಹಸಿವನ್ನು ತಡೆದು ತೂಕ ಹೆಚ್ಚಾಗುವಂತೆ ಮಾಡುತ್ತದೆ. ಹೀಗಾಗಿ ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಈ ಆಹಾರ ಅಷ್ಟೇನು ಸೂಕ್ತವಲ್ಲ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..!

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಆಗಿದೆ. ನಾಳೆಯೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಳೆಯೇ ತಿಳಿಯಲಿದೆ. ಮೇ 9ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ

ಹಣ ಉಳಿತಾಯಕ್ಕೆ RD ಅಥವಾ FD.. ಯಾವುದು ಬೆಟರ್..?

ಮನುಷ್ಯನ ಈಗಿನ ಜೀವನಶೈಲಿಯಿಂದ ಹಣದ ಅವಶ್ಯಕತೆ ಬಹಳ ಇದೆ. ಬೆಲೆ ಏರಿಕೆಯ ನಡುವೆ ಮುಂದಿನ ಜೀವನಕ್ಕಾಗಿ ಹಣ ಉಳಿಸಲೇಬೇಕಾಗಿದೆ‌. ಆದರೆ ಹಣ ಉಳಿಕೆಗೆ ಅಥವಾ ಇರುವ ಹಣಕ್ಕೆ ಬ್ಯಾಂಕ್ ನಲ್ಲಿ ಯಾವ ಮಾರ್ಗವನ್ನು ಬಳಸಬೇಕೆಂಬುದು

error: Content is protected !!