Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಯಲುಸೀಮೆಯ ದಶಕಗಳ ಕನಸು ನನಸು: ಚಿತ್ರದುರ್ಗಕ್ಕೆ ಭದ್ರೆ ಆಗಮನ, ಗೋನೂರಿನಲ್ಲಿ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕರೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ಬಯಲುಸೀಮೆ ಜನರ ಬಹು ದಶಕದ ಕನಸು ನನಸಾಗುವ ದಿನ ಸೆ.6ರಂದು ನಿಗದಿ ಆಗಿದ್ದು ಈ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ಒಂದೇಡೆ ಸೇರೋಣಾ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕರೆ ನೀಡಿದೆ.

ಚಿತ್ರದುರ್ಗ ಶಾಖಾ ಕಾಲುವೆಯ ಕೊನೇ ಭಾಗ ಗೋನೂರು ಬಳಿಗೆ ಸೆ.8ರ ರಾತ್ರಿ ಅಥವಾ 9ರ ಬೆಳಗ್ಗೆ ನೀರು ಬರುವ ಸಾಧ್ಯತೆ ಇದ್ದು, ಈ ಸಂದರ್ಭ ನಾವೆಲ್ಲೂ ಆ ಸ್ಥಳದಲ್ಲಿದ್ದು ಜಿಲ್ಲೆ ಪ್ರವೇಶಿಸಿದ ತಾಯಿ ಭದ್ರೆಗೆ ಗೌರವ ಸಲ್ಲಿಸುವುದು ಬಹಳ ಅಗತ್ಯ. ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯಸ್ಥರ ಜೊತೆ ದಿನಾಂಕ ಖಚಿತ ಪಡಿಸಿಕೊಂಡು, ಸಂಭ್ರಮದ ಸಭೆ ಆಯೋಜಿಸಲಾಗುವುದು.

ಸಮಿತಿಯ ಅಧ್ಯಕ್ಷ ಪಿ.ಕೋದಂಡರಾಮಯ್ಯ, ದಿವಂಗತರಾದ ಹೆಚ್.ಹನುಮಂತಪ್ಪ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಪ್ರಧಾನ ಸಂಚಾಲಕ ಡಾ. ಬಂಜಗೆರೆ ಪ್ರಕಾಶ್ ಸೇರಿ ಸಾವಿರಾರು ಮಂದಿ ಜನರು, ಮಠಾಧೀಶರು ಹಾಗೂ ಎಲ್ಲ ಪಕ್ಷಗಳ ಸಹಕಾರ ಹಾಗೂ ಹೋರಾಟದ ಫಲ ಭದ್ರೆ ನೀರು ಹರಿಯಲು ಆರಂಭಿಸಿದೆ. ಆದ್ದರಿಂದ ಭದ್ರೆ ನೀರು ಗೋನೂರು ಬಳಿ ಆಗಮಿಸುವ ಕ್ಷಣವನ್ನು ಕಣ್ತುಂಬಿಕೊಳ್ಳುವ ಅಗತ್ಯ ಇದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now