ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ನಗರದ ಪ್ರಶಾಂತನಗರದ ನಿವಾಸಿ ಲಕ್ಷ್ಮೀದೇವಿ (85) ಗುರುವಾರ ನಿಧನ ಹೊಂದಿದರು. ಪುತ್ರ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ನಾಗರಾಜ್, ನಾಲ್ವರು ಪುತ್ರಿಯರು ಹಾಗೂ ಅಳಿಯಂದಿರಾದ ರಾಜ್ಯ ಆಹಾರ ಇಲಾಖೆ ನಿವೃತ್ತ ಅಧಿಕಾರಿ ರಾಮೇಶ್ವರಪ್ಪ, ಜಿಪಂ ನಿವೃತ್ತ ಅಧಿಕಾರಿ ಪಾಂಡುರಂಗಪ್ಪ, ಜನಸೇನಾ ಪಕ್ಷದ ಜಿಲ್ಲಾಧ್ಯಕ್ಷ ಬಿ.ಟಿ.ರಾಜು ಇತರರಿದ್ದಾರೆ. ಸ್ವಗ್ರಾಮ ಬೀರೇನಹಳ್ಳಿಯಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಯಿತು.









