Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗುರು ಪೂರ್ಣಿಮೆ 2026: ಗುರುಗಳಿಗೆ ನೀಡಬಹುದಾದ ಶ್ರೇಷ್ಠ ಉಡುಗೊರೆಗಳು ಯಾವುವು?

---Advertisement---

ಇಂದು, ಜುಲೈ 29, 2026 ರಂದು ದೇಶಾದ್ಯಂತ ಗುರು ಪೂರ್ಣಿಮೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಆಷಾಢ ಮಾಸದ ಪೂರ್ಣಿಮೆಯಂದು ಮಹರ್ಷಿ ವೇದವ್ಯಾಸರ ಜಯಂತಿಯನ್ನೂ ಆಚರಿಸಲಾಗುವುದರಿಂದ ಈ ದಿನವನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ.

ಸನಾತನ ಧರ್ಮದಲ್ಲಿ ಗುರುವನ್ನು ದೇವರಿಗಿಂತಲೂ ಶ್ರೇಷ್ಠ ಸ್ಥಾನದಲ್ಲಿ ನೋಡಲಾಗುತ್ತದೆ. ಏಕೆಂದರೆ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಿ, ಜ್ಞಾನವೆಂಬ ಬೆಳಕಿನತ್ತ ಶಿಷ್ಯನನ್ನು ಮುನ್ನಡೆಸುವವನೇ ಗುರು. ಆದ್ದರಿಂದ ಗುರು ಪೂರ್ಣಿಮೆಯ ಪವಿತ್ರ ದಿನದಂದು ಶಿಷ್ಯರು ತಮ್ಮ ಗುರುಗಳನ್ನು ಪೂಜಿಸಿ, ಅವರ ಆಶೀರ್ವಾದ ಪಡೆಯುತ್ತಾ ಗುರುದಕ್ಷಿಣೆ ಅಥವಾ ಉಡುಗೊರೆಗಳನ್ನು ಸಮರ್ಪಿಸುತ್ತಾರೆ.

ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಗುರು ಪೂರ್ಣಿಮೆಯಂದು ಗುರುಗಳಿಗೆ ಸಮರ್ಪಿಸಲು ಶುಭಕರವೆಂದು ಪರಿಗಣಿಸಲಾದ ಕೆಲವು ಅತ್ಯುತ್ತಮ ಉಡುಗೊರೆಗಳು ಇಲ್ಲಿವೆ:

ಹೊಸ ವಸ್ತ್ರಗಳನ್ನು ನೀಡುವುದು

ಗುರು ಪೂರ್ಣಿಮೆಯಂದು ಗುರುಗಳಿಗೆ ಹೊಸ ಬಟ್ಟೆಗಳನ್ನು ಕಾಣಿಕೆಯಾಗಿ ನೀಡುವುದು ತುಂಬಾ ಶುಭಕರ. ನಿಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ದೋತಿ-ಕುರ್ತಾ, ಕುರ್ತಾ-ಪೈಜಾಮಾ, ಸೀರೆ ಅಥವಾ ಅವರಿಗೆ ಉಪಯುಕ್ತವಾಗುವ ಉಡುಪುಗಳನ್ನು ನೀಡಬಹುದು. ಗುರುಗಳು ನಿರ್ದಿಷ್ಟ ಶೈಲಿಯ ವಸ್ತ್ರ ಧರಿಸುತ್ತಿದ್ದರೆ, ಅವರ ಇಷ್ಟಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಇನ್ನಷ್ಟು ಉತ್ತಮ.

ಆಧ್ಯಾತ್ಮಿಕ ಅಥವಾ ಜ್ಞಾನವರ್ಧಕ ಪುಸ್ತಕಗಳು

ಗುರು ಎಂದರೆ ಜ್ಞಾನದ ಸಂಕೇತ. ಆದ್ದರಿಂದ ಒಂದು ಉತ್ತಮ ಪುಸ್ತಕ ಅಥವಾ ಆಧ್ಯಾತ್ಮಿಕ ಗ್ರಂಥವನ್ನು ಕೊಡುಗೆಯಾಗಿ ನೀಡುವುದು ಅತ್ಯಂತ ಮೌಲ್ಯಯುತ ಕಾಣಕೆಯಾಗಿದೆ. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ರಾಮಚರಿತಮಾನಸ ಮುಂತಾದ ಧಾರ್ಮಿಕ ಗ್ರಂಥಗಳು ಅಥವಾ ಅವರ ಆಸಕ್ತಿಗೆ ತಕ್ಕಂತಹ ಪುಸ್ತಕಗಳನ್ನು ನೀಡಬಹುದು.

ಹಣ್ಣು ಮತ್ತು ಸಿಹಿತಿಂಡಿಗಳ ಸಮರ್ಪಣೆ

ಗುರು ಪೂರ್ಣಿಮೆಯ ದಿನದಂದು ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ನೀಡಿ ಗುರುಗಳನ್ನು ಗೌರವಿಸುವ ಸಂಪ್ರದಾಯವಿದೆ. ಋತುಮಾನಕ್ಕೆ ತಕ್ಕಂತೆ ಲಭ್ಯವಿರುವ ಹಣ್ಣುಗಳು ಅಥವಾ ಸಿಹಿತಿಂಡಿಗಳ ಬುಟ್ಟಿಯನ್ನು ಅರ್ಪಿಸಿ ಅವರ ಆಶೀರ್ವಾದ ಪಡೆಯುವುದು ಮಂಗಳಕರ.

ಹಳದಿ ಬಣ್ಣದ ವಸ್ತುಗಳು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಳದಿ ಬಣ್ಣವು ‘ಗುರು’ ಗ್ರಹದ ಸಂಕೇತವಾಗಿದೆ. ಆದ್ದರಿಂದ ಗುರು ಪೂರ್ಣಿಮೆಯಂದು ಹಳದಿ ಬಣ್ಣದ ಉಡುಪುಗಳು, ಬಾಳೆಹಣ್ಣು, ಕಡಲೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳು ಅಥವಾ ಇತರ ಹಳದಿ ಬಣ್ಣದ ಉಪಯುಕ್ತ ವಸ್ತುಗಳನ್ನು ಸಮರ್ಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ.

ಪೆನ್ ಮತ್ತು ಡೈರಿಯಂತಹ ಉಪಯುಕ್ತ ವಸ್ತುಗಳು

ನಿಮ್ಮ ಗುರುಗಳು ಶಿಕ್ಷಕರಾಗಿದ್ದರೆ ಅಥವಾ ಬರವಣಿಗೆ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರೆ, ಉತ್ತಮ ದರ್ಜೆಯ ಪೆನ್, ಡೈರಿ ಅಥವಾ ನೋಟ್‌ಬುಕ್ ಅನ್ನು ಉಡುಗೊರೆಯಾಗಿ ನೀಡಬಹುದು. ಇದು ಅವರ ಜ್ಞಾನ ಸೇವೆಗೆ ಕೊಡುವ ಉತ್ತಮ ಗೌರವವಾಗಿದೆ.

ಅತ್ಯಂತ ಮೌಲ್ಯಯುತ ಕಾಣಿಕೆ – ಗೌರವ, ಕೃತಜ್ಞತೆ ಮತ್ತು ವಿನಯ

ಎಲ್ಲಾ ಭೌತಿಕ ಉಡುಗೊರೆಗಳಿಗಿಂತ ಶ್ರೇಷ್ಠವಾದುದು ಎಂದರೆ ಗುರುಗಳ ಮೇಲಿರುವ ಗೌರವಾದರ, ಕೃತಜ್ಞತೆ ಮತ್ತು ವಿನಯ. ಗುರುಗಳ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು, ಅವರು ಬೋಧಿಸಿದ ಸನ್ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಗುರು ಪೂರ್ಣಿಮೆಯ ನಿಜವಾದ ಸಾರಾಂಶವಾಗಿದೆ. ಭೌತಿಕ ವಸ್ತುಗಳಿಗಿಂತ ಅವರ ಮಾರ್ಗದರ್ಶನವನ್ನು ಗೌರವಿಸುವುದೇ ಅವರಿಗೆ ನೀಡುವ ನಿಜವಾದ ‘ಗುರುದಕ್ಷಿಣೆ’ಯಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕೇಸ್ : ಸುಪ್ರೀಂಕೋರ್ಟ್ ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ವಜಾ

ಚಿತ್ರದುರ್ಗ : ಅಪ್ರಾಪ್ತ ಬಾಲಕನಿಗೆ ಸ್ಕೂಟಿ ನೀಡಿದ್ದ ವಾಹನ ಮಾಲೀಕನಿಗೆ ₹30,000 ದಂಡ, ಶಿಕ್ಷೆ!

‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ : ಗುರು ಅಂಧಕಾರ ಕಳೆದು ಅರಿವಿನ ದಾರಿ ತೋರುವ ದಿವ್ಯ ಚೇತನ

ಪೊಲೀಸರಿಗೆ ಮಾಸಿಕ ಕಷ್ಟ ಪರಿಹಾರ ಭತ್ಯೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರಿನ  ಲಾಲ್ ಬಾಗ್ ನಲ್ಲಿ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ : ವಿವಿಧ ಸ್ಪರ್ಧೆಗಳು, ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಅವಕಾಶಗಳಿಲ್ಲದಂತೆ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿಸಲು ಸುರಕ್ಷಿತ ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರಿತ ಆನ್ಲೈನ್ ಪರೀಕ್ಷಾ ವ್ಯವಸ್ಥೆ ಅನಿವಾರ್ಯ