ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತೆ ಕಾಂಗ್ರೆಸ್ ಪಾಲಾಗಿದೆ. ಆದರೆ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ಸಿಗರಿಗೆ ಅನುಮಾನವಿದ್ದ ಕಾರಣ ಒಂದಷ್ಟು ಜನರ ತಲೆದಂಡವಾಗಿತ್ತು. ಅದರಲ್ಲಿ ಜಬ್ಬರ್ ಕೂಡ ಒಬ್ಬರು. ಅಮಾನತುಗೊಂಡ ಜಬ್ಬರ್ ಅವರು ದಾವಣಗೆರೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಕ್ರಮಗಳು ಏನು ಗ್ಯಾರಂಟಿ ಕಾರ್ಯಕ್ರಮಗಳು ಇದಾವೆ, ಅದು ಗೆಲ್ಲುವುದಕ್ಕೆ ಬಹಳ ಮುಖ್ಯವಾಯ್ತು. ಎರಡನೆಯದು ಜಮೀರ್ ಅಹ್ಮದ್ ಖಾನ್ ಸಾಹೇಬ್ರು ಮೂರ್ನಾಲ್ಕು ಗಂಟೆ ಅಲ್ಲಿಗೆ ಬಂದು ಹೋದ್ರಲ್ವಾ ಅದು, ರಿಯಾಕ್ಷನ್ ಇತ್ತಲ್ಲ ಅದು ತಣ್ಣಗೆ ಆಗಿದೆ ಎಂದು ಗೆಲುವಿ ಕ್ರೆಡಿಟ್ ಅನ್ನು ಜಮೀರ್ ಅವರಿಗೆ ನೀಡಿದ್ದಾರೆ.
ನಮ್ಮ ಪಕ್ಷ 5 ಸಾವಿರ ಚಿಲ್ಲರೆಯಿಂದ ಗೆಲ್ಲುವುದಕ್ಕೆ ಅವಕಾಶವಾಗಿದೆ. ರಿಜ್ವಾನ್ನಿಂದ, ಸಲೀಂ ರಿಂದ ಎಷ್ಟು ಆಗಿದೆ ಗೊತ್ತಿಲ್ಲ. ಒಗ್ಗಟ್ಟಾಗಿ ಕೆಲಸ ಮಾಡೋದಕ್ಕೆ ನಂಗೆ ಆರೋಗ್ಯ ಸರಿ ಇರಲಿಲ್ಲ. ಎರಡನೇಯದು ನಂಗೆ ಯಾರೂ ಕೂಡ ಕರೆದಿರಲಿಲ್ಲ. ಬೇಜಾರ್ ಆದ್ಮೇಲೆ ಆರೋಗ್ಯ ಕೆಡುತ್ತೆ. ಬೇಜಾರಾದಾಗ ಶುಗರ್ ಜಾಸ್ತಿ ಆಗುತ್ತೆ, ಬಿಪಿ ಜಾಸ್ತಿ ಆಗುತ್ತೆ. ಡಿಕೆ ಶಿವಕುಮಾರ್ ಅವರಿಗೆ ಈ ಸಂಬಂಧ ಹೇಳಿದ್ದೆ. ಅವರು ಪ್ರೆಸ್ ಕಾನ್ಫರೆನ್ಸ್ ಮಾಡೋದಕ್ಕೆ ಹೇಳಿದ್ದರು. ನಾನು ಮಾಡಿದ್ದೆ ಕೂಡ ಎಂದಿದ್ದಾರೆ.

ಮುಖ್ಯಮಂತ್ರಿ ಅವರು ದೊಡ್ಡ ಮನಸ್ಸು ಮಾಡಿ ನೂರು ಕೋಟಿ ರೂಪಾಯಿಯನ್ನು ದಾವಣಗೆರೆ ದಕ್ಷಿಣಕ್ಕೆ ಕೊಟ್ಟಿದ್ದಾರೆ. ನಾನು ಗೆದ್ದಿರುವ ಅಭ್ಯರ್ಥಿಗಾಗಲಿ, ಜಿಲ್ಲಾ ಮಂತ್ರಿಗಾಗಲಿ, ಮುಖ್ಯಮಂತ್ರಿಗಳಿಗೆ ಬೇಡಿಕೊಳ್ಳುವುದು ಏನಂದ್ರೆ ನೂರು ಕೋಟಿ ಕೊಟ್ಟಿದ್ದೀರಲ್ಲ, 40-50 ವರ್ಷದಿಂದ ಬೇಡಿಕೆ ಇರುವಂತದ್ದು ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪದವಿ ಕಾಲೇಜೇ ಇಲ್ಲ ಅಲ್ಲಿ. ಸ್ವತಂತ್ರ ಸಿಕ್ಕಾಗಿನಿಂದಲೂ ಸೌಲಭ್ಯ ಇಲ್ಲ. ಆಸ್ಪತ್ರೆಗೆ ಹೋಗ್ಬೇಕು ಅಂದ್ರೆನೆ ನೂರು ಇನ್ನೂರು ಕೊಟ್ಟು ಆಟೋಗೆ ಹೋಗ್ಬೇಕು. ಗೆದ್ದಿದ್ದೀರ, ಹಣ ಬಂದಿದೆ. ನಮ್ಮಲ್ಲಿ ಜಾಗ ಇದೆ. ಅದನ್ನ ಮಾಡಿ ಎಂದಿದ್ದಾರೆ.


















