ಬೆಂಗಳೂರು: ನಿನ್ನೆ ಬೀಸಿದ ಗಾಳಿಗೆ, ಸುರಿದ ಮಳೆಗೆ ಬೆಂಗಳೂರಲ್ಲಿ ಸೃಷ್ಟಿಯಾಗಿರುವ ಅವಾಂತರಗಳು ಒಂದೆರಡಲ್ಲ. ಅದರಲ್ಲೂ ಬೌರಿಂಗ್ ಆಸ್ಪತ್ರೆಯ ಕಾಪೌಂಡ್ ಕುಸಿದು ಏಳು ಜನ ಸಾವನ್ನಪ್ಪಿದ್ದಾರೆ. ಆ ಬಗ್ಗೆ ಶಾಸಕ ರಿಜ್ವಾನ್ ಅರ್ಷದ್ ಮಾತನ್ನಾಡಿದ್ದಾರೆ.
ಇದು ಪ್ರಕೃತಿಯ ಆರ್ಭಟ. ಪ್ರಕೃತಿಯ ಆರ್ಭಟದ ಮುಂದೆ ಯಾರೂ ಕೂಡ ನಿಲ್ಲುವುದಕ್ಕೆ ಸಾಧ್ಯವಿಲ್ಲ. ನಾವೆಷ್ಟೇ ಬಲಿಷ್ಠ ಅಂತ ತಿಳಿದುಕೊಂಡರು ಸಹ ಸಾಧ್ಯವಿಲ್ಲ. ನಮ್ಮ ಪ್ರಿಪರೇಷನ್ ಇರಬೇಕು. ಇನ್ನು ಹೆಚ್ಚಿನ ಪ್ರಿಪರೇಷನ್ ಮಾಡಿಕೊಳ್ಳಬೇಕು. ಮಳೆ ಬಂದಿರುವಂತ ಪ್ರಮಾಣ ನೋಡಿ, ಗಾಳಿ ಬೀಸಿರುವ ಪ್ರಮಾಣ ನಿಒಡಿ. ನಾವೂ ಇನ್ನು ಹೆಚ್ಚಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನ ನಾನು ಒಪ್ಪಿಕೊಳ್ತೇನೆ. ಈಗ ನನ್ನ ಹಿಂದಿರುವ ಗೋಡೆ ನೋಡಿ. ಈಗ ಈ ಗೋಡೆ ಬಿದ್ದೋಗುತ್ತೆ ಅಂತ ಎಂಎಲ್ಎ ಆಗಿ ಅರ್ಥವಾಗುತ್ತಾ. ನೀವೂಗಳು ಸಾಕಷ್ಟು ಬಾರಿ ಅಲ್ಲಿಗೆ ಬಂದಿದ್ದೀರಿ. ನೀವೂ ಕೂಡ ಈ ಗೋಡೆ ಬಿದ್ದೋಗುತ್ತೆ ಅಂತ ಯಾವತ್ತು ತೋರಿಸಿರಲಿಲ್ಲ. ಯಾಕಂದ್ರೆ ನಿಮಗೂ ಕಾಣಿಸೋದಿಲ್ಲ, ನಮಗೂ ಕಾಣಿಸೋದಿಲ್ಲ ಅಲ್ವಾ.

ತನಿಖೆಯ ನಂತರ ಎಲ್ಲವೂ ಗೊತ್ತಾಗುತ್ತೆ. ಯಾಕೆ ಗೋಡೆ ಕುಸಿದಿದೆ ಎಂದು. 25 ವರ್ಷಗಳಿಗಿಂತ ಬೇಗ ಬಿದ್ದರೆ ಯಾಕೆ ಅನ್ನೋದನ್ನ ನೋಡಬೇಕು. ಯಾಕಂದ್ರೆ ಈ ಹಳೆಯ ಮನೆಗಳು, ಕಟ್ಟಡಗಳನ್ನು ನೋಡಿದಾಗ ನೂರಾರು ವರ್ಷಗಳು ಇರುತ್ತವೆ. ಕೇವಲ ಮೂವತ್ತೆ ವರ್ಷಕ್ಕೆ ಗೋಡೆ ಬಿತ್ತು ಅಂದ್ರೆ ಯಾಕೆ ಅನ್ನೋದು ತನಿಖೆಯಿಂದ ತಿಳಿಯಬೇಕಾಗಿದೆ. ಹೆರಿಟೇಜ್ ಬಿಲ್ಡಿಂಗ್ ಗಳನ್ನು ಉಳಿಸಿಕೊಳ್ಳುವತ್ತ ಗಮನ ಕೊಡಬೇಕು. ಸರ್ಕಾರ ಅದಕ್ಕೆ ಬೇಕಾದ್ದನ್ನು ಒದಗಿಸಬೇಕು. ಇಲ್ಲಂದ್ರೆ ಮುಂದಿನ ದಿನಗಳ ಮಕ್ಕಳಿಗೆ ಆ ಸಂಪ್ರದಾಯ ನೆನಪೇ ಇರೋಲ್ಲ ಎಂದಿದ್ದಾರೆ.



















