ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ನಗರದ ಎಪಿಎಂಸಿ ಮಾರ್ಕೆಟ್ ಗೇಟ್ ಎದುರು, ಜುಡಿಯೋ ಮೇಲ್ಭಾಗ ಜಗಳೂರು ಮಹಾಲಿಂಗಪ್ಪ ಟವರ್ಸ್ ನಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘ (ರಿ) ಇವರ ವತಿಯಿಂದ
ದಂತ ವೈದ್ಯರಿಗೆ ವಿಶೇಷ ಕಾರ್ಯಾಗಾರ ಇಂದು ಸಂಜೆ ನಡೆಯಲಿದೆ.

ಮಾನಸಿಕ ಒತ್ತಡ ಹಾಗೂ ದೈನಂದಿನ ಕೆಲಸ ಕಾರ್ಯಗಳಿಂದ ಒತ್ತಡ ನಿವಾರಣೆಯ ಬಗ್ಗೆ ಮಹಾರಾಷ್ಟ್ರದ ಕಲ್ಯಾಣ ನಗರದ ಡಾ.ವಿಮನ್ಯು ಅಕ್ಕೇರ ಅವರು ದಂತ ವೈದ್ಯರಿಗೆ ಪ್ರಾಣಿಕ್ ಹೀಲಿಂಗ್ ಹಾಗೂ ಧ್ಯಾನದ ಬಗ್ಗೆ ಒಂದು ಗಂಟೆಯ ವಿಶೇಷ ತರಬೇತಿ ನೀಡಲಿದ್ದಾರೆ. ಇವರ ಜೊತೆಗೆ ನಗರದ ಎಚ್ ಡಿ ಎಫ್ ಸಿ ಬ್ಯಾಂಕ್ ನ ಶಿವರಾಜ್ ಪಾಟೀಲ್ ರವರು ಆರ್ಥಿಕ ಸಬಲತೆ ಹಾಗೂ ಆರ್ಥಿಕ ನಿರ್ವಹಣೆಯ ಬಗ್ಗೆ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರಿಗೆ ಈ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















