ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಯ ಪ್ರಚಾರದ ಅಬ್ಬರ ಭರದಿಂದ ಸಾಗ್ತಾ ಇದೆ. ಆದರೆ ಇತ್ತ ಸಚಿವ ಜಮೀರ್ ಅಹ್ಮದ್ ಅವರು ಮಾತ್ರ ಪ್ರಯತ್ನ ಫಲ ಸಿಕ್ಕಿಲ್ಲ ಅನ್ನೋ ಬೇಸರದಲ್ಲಿದ್ದಾರೆ. ಸಮರ್ಥ್ ನಾಮಪತ್ರ ಸಲ್ಲಿಕೆ ಮಾಡುವಾಗ ಕೂಡ ದಾವಣಗೆರೆಗೆ ಹೋಗಿಲ್ಲ. ಈ ಸಂಬಂಧ ಸಚಿವ ಜಮೀರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾಮಿನೇಷನ್ ಸಲ್ಲಿಸುವಾಗ ನಾನು ಹೋಗ್ಬೇಕಿತ್ತು. ಮುಖ್ಯಮಂತ್ರಿಗಳು ಕೂಡ ಹೋಗಬೇಕು ಅಂತ ಹೇಳಿದ್ದರು. ನನ್ನದು ಮೂರು ಕ್ವೆಷನ್ ಇತ್ತು. ಹಾಗಾಗಿ ಸೆಷನ್ ಅಟೆಂಡ್ ಮಾಡಬೇಕಾಗಿತ್ತು. ಪ್ರಚಾರಕ್ಕೆ ನಾವೆಲ್ಲ ಕೂಡ ಹೋಗ್ತೀವಿ. ಗೆಲ್ಲಿಸಿಕೊಂಡು ಬರ್ತೀವಿ. ದಾವಣಗೆರೆಯಲ್ಲಿ ನಾವೂ ಗೆಲ್ತೀವಿ. ಶಾಮನೂರು ಶಿವಶಂಕರಪ್ಪ ಅಜ್ಜನವರು ನಿಧನ ಆದ್ಮೇಲೆ ನಾವೂ ಟಿಕೆಟ್ ಕೇಳಿದ್ದು ನಿಜ. 85 ಸಾವುರ ಮತಗಳಿವೆ. ದಯವಿಟ್ಟು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದು ನಿಜ.. ಅವತ್ತಿಂದ ಆ ಪದ್ಧತಿ ಬಂದಿದೆ. ಯಾರಾದ್ರೂ ನಿಧನ ಹೊಂದಿದರೆ ಅವರ ಕುಟುಂಬದವರಿಗೆ ಕೊಡುವ ಪದ್ಧತಿ ಇದೆ ಎಂದಿದ್ದಾರೆ.
ಜೊತೆಗೆ ನಾವೂ ಕೂಡ ಸಿದ್ದರಾಮಯ್ಯ ಅವರ ಜೊತೆಗೆ ಮಾತನ್ನಾಡಿದ್ದೇವೆ, ಡಿಕೆ ಶಿವಕುಮಾರ್ ಜೊತೆಗೆ ಮಾತನ್ನಾಡಿದ್ದೇವೆ. ಸುರ್ಜೆವಾಲ ಅವರ ಜೊತೆಗೆ ಮಾತನ್ನಾಡಿದ್ದೆವು. ಅವತ್ತಿಂದ ಕುಟುಂಬಸ್ಥರಿಗೆ ಕೊಡುವ ಪದ್ಧತಿ ಇದೆ. ಹೀಗಾಗಿ ಅವರಿಗೆ ಕೊಡುತ್ತೇವೆ ಎಂದಾಗ ನಾವೂ ಒಪ್ಪಿದ್ದೇವೆ. ಮುಂದೆ ಜನರಲ್ ಎಲೆಕ್ಷನ್ ನಲ್ಲಿ ಕನ್ಸಿಡರ್ ಮಾಡೋಣಾ ಎಂದಿದ್ದಾರೆ. ಮೊನ್ನೆ ನಾವೆಲ್ಲಾ ಜೊತೆಗೆ ಇದ್ದೆವು. ಮಲ್ಲಿಕಾರ್ಜುನ ಅವರು, ಸಿಎಂ ಅವರಹ ಕರೆದಿದ್ದರು. ನಾನು ಐದು ದಿನ ದಾವಣಗೆರೆಯಲ್ಲಿಯೇ ಇರ್ತೇನೆ. ಗೆಲ್ಲಿಸಿಕೊಂಡು ಬರ್ತೇನೆ ಎಂದಿದ್ದಾರೆ.






