ಬೆಸಿಗೆಗಾಲ ಬಂತೆದಂರೆ ನೇರಳೆ ಹಣ್ಣಿನ ಸೀಸನ್ ಪ್ರಾರಂಭ.ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ನಿಮಗೆ ಗೊತ್ತೆ ಆಯುರ್ವೇದದಿಂದ ಆಧುನಿಕ ವಿಜ್ಞಾನದವರೆಗೆ, ಈ ಸಲಹೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎನ್ನಲಾಗಿದೆ.
ನೇರಳೆ ಆರೋಗ್ಯಕ್ಕೆ ವರದಾನವಾಗಿದೆ. ಆದರೆ ತಪ್ಪಾಗಿ ತಿಂದರೆ ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ದೇಹದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ ಗೊತ್ತೆ ?
ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಗಂಟಲು ಒಣಗುತ್ತದೆ ಅಥವಾ ನೋವುಂಟಾಗುತ್ತದೆ. ಇಂತಹ ವೇಳೆ ತಣ್ಣೀರು ಕುಡಿಯುವುದರಿಂದ ಗಂಟಲಿನ ಕಿರಿಕಿರಿ ಅಥವಾ ಟಾನ್ಸಿಲ್ ಸಮಸ್ಯೆಗಳು ಉಂಟಾಗಬಹುದು.
ಮಧುಮೇಹಿಗಳಿಗೆ ನೇರಳೆ ಹಣ್ಣು ಅಮೃತದಂತೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಆದರೆ ನೇರಳೆ ಹಣ್ಣು ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ, ಇದು ದೇಹದಲ್ಲಿ ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
ನೇರಳೆ ಹಣ್ಣನ್ನು ತಿಂದ ತಕ್ಷಣ ನೀರು ಕುಡಿದರೆ, ಕೆಲವು ಜೀರ್ಣಕಾರಿ ರಸಗಳು ನಮ್ಮ ಲಾಲಾರಸದೊಂದಿಗೆ ಬೆರೆತುಹೋಗುತ್ತವೆ.ಹೊಟ್ಟೆ ನೋವಿನಿಂದ ಬಳಲಬಹುದು.
ನೇರಳೆ ಹಣ್ಣನ್ನು ಯಾವಾಗಲೂ ಸ್ವಲ್ಪ ಕಪ್ಪು ಉಪ್ಪು ಅಥವಾ ಸಮುದ್ರ ಉಪ್ಪಿನೊಂದಿಗೆ ತಿನ್ನಬೇಕು. ಇದರಿಂದ ಕಹಿ ಕಡಿಮೆಯಾಗುತ್ತದೆ ಮತ್ತು ಸುಲಭವಾಹಿ ಜೀರ್ಣವಾಗುತ್ತದೆ. ನೇರಳೆ ಹಣ್ಣನ್ನು ತಿಂದ ಕನಿಷ್ಠ 30 ರಿಂದ 45 ನಿಮಿಷಗಳ ನಂತರ ನೀರು ಕುಡಿಯುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ.





