Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆಯ ಈ ಗ್ರಾಮದಲ್ಲಿ ಡಿಚ್ಚಿ ಹಬ್ಬ’! ಅತ್ತಿಗೆ-ನಾದಿನಿ ಡಿಕ್ಕಿ ಹೊಡೆದುಕೊಳ್ಳುತ್ತಾರೆ! ಏಕೆ?

---Advertisement---

ಅತ್ತೆ ಸೊಸೆಯರು ಡಿಕ್ಕಿ ಹೊಡೆಯುವ ವಿಶೇಷ ಹಬ್ಬದ ಆಚರಣೆ ಬಗ್ಗೆ ಕೇಳಿದ್ದೀರಾ ?ಆದರೆ ಇದು ಯಾವುದೋ ಸೇಡು ಅಥವಾ ಜಗಳದಿಂದಲ್ಲ. ಈ ಹಬ್ಬದ ವಿಶೇಷತೆ ಏನು ಗೊತ್ತಾ?. ಅತ್ತಿಗೆ, ನಾದಿನಿಯರು ಪರಸ್ಪರ ತಲೆಗಳನ್ನ ಹಿಡಿದುಕೊಂಡು ಡಿಕ್ಕಿ ಹೊಡೆಯುವ ಹಬ್ಬವನ್ನು ಗ್ರಾಮಸ್ಥರು ಆಚರಿಸುತ್ತಾರೆ.ಗ್ರಾಮ ದೇವರ ಸಮ್ಮುಖದಲ್ಲಿ ಹೆಣ್ಣುಮಕ್ಕಳು-ಸೊಸೆಯಂದಿರು ತಲೆ ಹಿಡಿದು ಡಿಚ್ಚಿ ಹೊಡೆದುಕೊಳ್ಳುತ್ತಾರೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಿ.ಎನ್. ಮಾಳಿಗೆ ಗ್ರಾಮದಲ್ಲಿ ಇಂತಹ ಸಂಭ್ರಮದ ಹಬ್ಬ ಆಚರಣೆ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ಬುಡಕಟ್ಟು ಜನಾಂಗದ ಆರಾಧ್ಯ ದೈವ ಅಹೋಬಲ ನರಸಿಂಹಸ್ವಾಮಿ ಜಾತ್ರೆ ಆಚರಣೆ ಮಾಡುತ್ತಾರೆ, ಆಗ, ಅತ್ತಿಗೆ-ನಾದಿನಿಯರು ಡಿಕ್ಕಿ ಹಬ್ಬ ಇಲ್ಲಿನ ವಿಶೇಷವಾಗಿದೆ. ಹೀಗೆ ಡಿಕ್ಕಿ ಹೊಡೆಯುವ ಮೂಲಕ ತಮ್ಮ ಕುಟುಂಬದಲ್ಲಾದ ಹಳೆ ವೈಷಮ್ಯ ಮರೆತು ಸುಖಜೀನವ ನಡೆಸಲಿ ಎಂಬುದು ನಾಯಕ್​ ಸಮುದಾಯದ ಹಿರಿಯರು ಪರಂಪರಾಗತವಾಗಿ ನಡೆಸಿಕೊಂಡು ಬಂದ ವಿಶಿಷ್ಟ ಪದ್ಧತಿ ಇದಾಗಿದೆ.

ಇನ್ನೂ ಪುರಾತನ ಕಾಲದಿಂದಲೂ ಈ ಹಬ್ಬವನ್ನು ಗ್ರಾಮದಲ್ಲಿ ಆಚರಣೆ ಮಾಡುತ್ತಿದ್ದು, ಗ್ರಾಮದ ಯುವಕರು ಹೆಣ್ಣುಮಕ್ಕಳನ್ನು ಕುಣಿಯುತ್ತ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಾರೆ. ದೇವರಿಗೆ ಹರಕೆ ಹೊತ್ತಂತೆ, ಮಣೇವು ಕಾರ್ಯಕ್ರಮ ನೆರವೇರಿಸಿ, ಯುವಕರು ಬಾಳೆಹಣ್ಣು ಬೆಲ್ಲದ ಪ್ರಸಾದ ಸ್ವೀಕರಿಸಿ ಗ್ರಾಮಸ್ಥರಿಗೆ ಪ್ರಸಾದ ಹಂಚುತ್ತಾರೆ. ಈ ರೀತಿ ಭಕ್ತರ ಹರಕೆ ನೆರವೇರಿಸುವ ನರಸಿಂಹಸ್ವಾಮಿಗೆ ಭಕ್ತರು ಸಾಮೂಹಿಕವಾಗಿ ಬಾಳೆಹಣ್ಣಿನ ಗೊನೆ ಸಮರ್ಪಣೆ ಮಾಡುತ್ತಾರೆ. ಈ‌ ಮೂಲಕ ಗ್ರಾಮದ ಸಮುದಾಯದ ಎಲ್ಲಾ ಜನತೆ ಒಂದೆಂಬ ಭಾವನೆಯೊಂದಿಗೆ ಸೇರಿ ಜಾತ್ರೆ ಮಾಡ್ತಾರೆ. ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ನಾದಿನಿಯರು ಬಂದ್ರೆ, ಅಕ್ಕಪಕ್ಕದ ಗ್ರಾಮಸ್ಥರೂ ಭಾಗಿಯಾಗುವುದು ಇನ್ನೂ ವಿಶೇಷವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...