Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2.5 ಲಕ್ಷ ಹುದ್ದೆಗಳು ಖಾಲಿ ಇದಾವೆ : ಚಿತ್ರದುರ್ಗದಲ್ಲಿ ಆರ್.ಅಶೋಕ್ ಹೇಳಿದ್ದೇನು..?

---Advertisement---

ಚಿತ್ರದುರ್ಗ: ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಎಉವುದಕ್ಕೆ ಆಗ್ರಹಿಸಿ ಸಾವಿರಾರು ಅಭ್ಯರ್ಥಿಗಳು ಇಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಒಂದು ಹೋರಾಟ ನಡೀತಾ ಇದೆ. ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗ ಖಾಲಿ ಇದೆ. ಈಗಾಗಲೇ ಹಣಕಾಸು ವಿಭಾಗದವರು ಸುಮಾರು 65 ಸಾವಿರ ಹುದ್ದೆಗಳನ್ನ ಭರ್ತಿ ಮಾಡಿ ಅಂತ ಆದೇಶ ಕೊಟ್ಟಿದ್ದಾರೆ.

ಆದರೆ ಈ ಆದೇಶ ಕೊಟ್ಟು 6 ತಿಂಗಳಾಗಿದೆ. ಇನ್ನು ಒಂದೇ ಒಂದು ಉದ್ಯೋಗಕ್ಕೂ ಕೂಡ ಇಂಟರ್ ವ್ಯೂ ಕರೆದಿಲ್ಲ. ಈ ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ. ಒಬ್ಬ ನಿರುದ್ಯೋಗಿಗೆ ಉದ್ಯೋಗವನ್ನ ಕೊಡಲಿಲ್ಲ. ಇವರು ಅಧಿಕಾರದ ಕಚ್ಚಾಟ. ಇವರಿಗೆ ಮಾತ್ರ ಉದ್ಯೋಗ ಬೇಕು. ಉಪಮುಖ್ಯಮಂತ್ರಿಗರ ಮುಖ್ಯಮಂತ್ರಿ ಉದ್ಯೋಗ ಬೇಕು. ಮುಖ್ಯಮಂತ್ರಿಗೆ ಐದು ವರ್ಷವೂ ಹುದ್ದೆ ಬೇಕು. ಕೋಟಿ ಕೋಟಿ ಆದಾಯಗಳು ಬರುವ ಉದ್ಯೋಗ ಬೇಕು.

ಆದರೆ ಬಡವರ ಮಕ್ಕಳು ಉದ್ಯೋಗ ಇಲ್ಲದೆ ವಂಚಿತರಾಗಿದ್ದಾರೆ. ಅದರ ವಿರುದ್ಧ ಸುಮಾರು 20 ಸಾವಿರ ನಿರುದ್ಯೋಗಿಗಳು, ಅವರ ಹೋರಾಟಕ್ಕೆ ನಾನು ಬೆಂಬಲ ಕೊಡ್ತಾ ಇದ್ದೀನಿ. ನಾನು ಅಲ್ಲಿಗೆ ಹೋಗ್ತಾ ಇದ್ದೀನಿ. ಪಾಪರ್ ಆಗಿದೆ ಸರ್ಕಾರ, ಸಂಬಳ ಕೊಡುವುದಕ್ಕೂ ದುಡ್ಡಿಲ್ಲ. ಆತ್ಮಹತ್ಯೆಗಳು ನಡೀತಾ ಇದ್ದಾವೆ. ಕೆಎಸ್ಆರ್ಟಿಸಿ ಅವರು ಅರಿಯರ್ಸ್ ಕೊಟ್ಟಿಲ್ಲ ಅಂತ, ಅಂಗನವಾಡಿಯವರು ಇನ್ನೇನು ಶುರು ಮಾಡ್ತಾವ್ರೆ, ಗುತ್ತಿಗೆದಾರರು 35 ಕೋಟಿ ಬ್ಯಾಲೆನ್ಸ್ ಕೊಡಬೇಕು ಅಂತಿದ್ದಾರೆ. ಎಲ್ಲೂ ಅಭಿವೃದ್ಧಿ ಕಾರ್ಯ ನಡೀತಾ ಇಲ್ಲ. ತಕ್ಷಣ ಖಾಲಿ ಹುದ್ದೆಗಳ ಭರ್ತಿಗೆ ಇಂಟರ್ ವ್ಯೂ ಕರೀಬೇಕು ಎಂದು ಆಗ್ರಹಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...