Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇಂದ್ರ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ರೇಷನ್ ಅಕ್ಕಿಯ ಗುಣಮಟ್ಟ ಹೆಚ್ಚಳಕ್ಕೆ ನಿರ್ಧಾರ

---Advertisement---

ನವದೆಹಲಿ: ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಮೂಲಕ ವಿತರಿಸಲಾಗುವ ರೇಷನ್ ಅಕ್ಕಿಯ ಗುಣಮಟ್ಟವನ್ನು ಅತಿ ಶೀಘ್ರದಲ್ಲೇ ಗಣನೀಯವಾಗಿ ಹೆಚ್ಚಿಸಲು ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.

ನಿತ್ಯ ರೇಷನ್ ಅಂಗಡಿಗಳಿಂದ ಸಿಗುವ ಅಕ್ಕಿಯಲ್ಲಿ ನುಚ್ಚಿನ ಪ್ರಮಾಣ ಹೆಚ್ಚಿರುತ್ತಿದ್ದ ಕಾರಣ ಅಸಮಾಧಾನಗೊಂಡಿದ್ದ ಬಡ ಜನರಿಗೆ ಈ ನಿರ್ಧಾರ ದೊಡ್ಡ ಸಮಾಧಾನ ತಂದಿದೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಿಂದಾಗಿ ದೇಶದ ಸುಮಾರು 80 ಕೋಟಿಗೂ ಅಧಿಕ ಸಾಮಾನ್ಯ ಹಾಗೂ ಬಡ ಫಲಾನುಭವಿಗಳಿಗೆ ಇನ್ನು ಮುಂದೆ ಗುಣಮಟ್ಟದ ಮತ್ತು ಪೌಷ್ಟಿಕಾಂಶಯುಕ್ತ ಅಕ್ಕಿ ನೇರವಾಗಿ ತಲುಪಲಿದೆ. ಆಹಾರ ಭದ್ರತೆಯನ್ನು ಕೇವಲ ಪ್ರಮಾಣದಲ್ಲಿ ಮಾತ್ರವಲ್ಲದೆ, ಗುಣಮಟ್ಟದಲ್ಲೂ ಬಲಪಡಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದುವರೆಗೆ ಪಡಿತರ ವ್ಯವಸ್ಥೆಯಲ್ಲಿ ಪೂರೈಕೆಯಾಗುತ್ತಿದ್ದ ಸಾಮಾನ್ಯ ಅಕ್ಕಿಯಲ್ಲಿ ಶೇಕಡಾ 25 ರಷ್ಟು ನುಚ್ಚು ಇರಲು ಕಾನೂನಿನಲ್ಲಿ ಅವಕಾಶವಿತ್ತು. ಆದರೆ ಇನ್ಮುಂದೆ ಈ ಪ್ರಮಾಣವನ್ನು ಕೇವಲ ಶೇಕಡಾ 10 ಕ್ಕೆ ಸೀಮಿತಗೊಳಿಸಲಾಗಿದೆ. ಅದೇ ರೀತಿ, ಬಡವರ ಆಹಾರದ ಪ್ರಮುಖ ಭಾಗವಾಗಿರುವ ಉಪ್ಪುಡಿ (ಬboiled) ಅಕ್ಕಿಯಲ್ಲಿದ್ದ ಶೇಕಡಾ 16 ರಷ್ಟು ನುಚ್ಚಿನ ಪ್ರಮಾಣವನ್ನು ಈಗ ಕೇವಲ ಶೇಕಡಾ 5 ಕ್ಕೆ ಇಳಿಸಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಈ ಮಹತ್ವದ ಬದಲಾವಣೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ಮತ್ತು ಆಹಾರದ ಹಕ್ಕನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ರೇಷನ್ ಅಕ್ಕಿಯಲ್ಲಿ ನುಚ್ಚಿನ ಪ್ರಮಾಣ ತಗ್ಗುವುದರಿಂದ ಅನ್ನದ ರುಚಿ ಮತ್ತು ಗುಣಮಟ್ಟ ಹೆಚ್ಚಲಿದೆ.

Join WhatsApp

Join Now

Join Telegram

Join Now