ಬೆಂಗಳೂರು: ಶಿವಾಜಿ ಜಯಂತಿ ಮೆರವಣಿಗೆಯ ವೇಳೆ ನಡೆದ ಕ್ಳು ತೂರಾಟ ಪ್ರಕರಣದ ನಂತರ ಬಾಗಲಕೋಟೆ ಇನ್ನು ಬೂದಿ ಮುಚ್ಚಿದ ಕೆಂಡದಂತೆ ಇದೆ. ಎಸ್ಪಿ ಹಣೆಗೆ ಕಲ್ಲು ಬಿದ್ದಿತ್ತು. ಕಿಲ್ಲಾ ಓಣಿಯಲ್ಲಿ ಇದೀಗ ಭದ್ರತೆ ಮತ್ತಷ್ಟು ಹೆಚ್ಚಾಗಿದೆ. ಗದಗ, ಧಾರವಾಡ ಸೇರಿದಂತೆ ಒಟ್ಟು ಐವರು ಎಸ್ಪಿಗಳು, ಎಂಟು ಡಿವೈಎಸ್ಪಿ, 16 ಸಿಪಿಐ, 32 ಪಿಎಸ್ಐ, 65 ಎಎಸ್ಐ, 450 ಕಾನ್ಸಸ್ಟೇಬಲ್ ಸೇರಿದಂತೆ ಬಿಹಿ ಭದ್ರತೆಯನ್ನ ಹೆಚ್ಚಿಸಲಾಗಿದೆ.
ಈ ಸಂಬಂಧ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಯಾರನ್ನು ರಕ್ಷಣೆ ಮಾಡುವುದಿಲ್ಲ. ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಈಗಾಗಲೇ ಅಲ್ಲಿ ಎಂಟು ಜನರನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಎಲ್ಲವೂ ಕಂಟ್ರೋಲ್ ನಲ್ಲಿದೆ. ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ. ಜನ ಕೂಡ ಅರ್ಥ ಮಾಡಿಕೊಳ್ಳಬೇಕು. ಶಾಂತಿಯುತ ಸಭೆ ನಡೆಸುವುದಕ್ಕೆ ಸೂಚನೆ ನೀಡಿದ್ದೇನೆ. ಈಗ ಎಲ್ಲವೂ ಹತೋಟಿಯಲ್ಲಿದೆ ಎಂದಿದ್ದಾರೆ.

ತಿಮ್ಮಾಪುರ ಅವರು ಇದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನ ಹೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ್ದು, ಮುಂದೆ ಎಲೆಕ್ಷನ್ ಬರ್ತಾ ಇದೆಯಲ್ಲ ಅದಕ್ಕೆ ಆ ರೀತಿ ಹೇಳಿರಬಹುದು ಅವರು. ನಾವೂ ಫೋರ್ಸ್ ಇಟ್ಟಿದ್ದೇವೆ. ಅಂತ ಅಹಿತಕರ ಘಟನೆಯಾದರೆ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರಚೋದನಕಾರಿ ಭಾಷಣದ ಬಗ್ಗೆ ಇನ್ನು ರೂಲ್ಸ್ ಕಂಪ್ಲೀಟ್ ಆಗಿಲ್ಲ. ಗವರ್ನರ್ ಪರ್ಮಿಷನ್ ಕೊಡಬೇಕು. ಅದು ಆಗುವವರೆಗೂ ಎಫೆಕ್ಟೀವ್ ಬರಲ್ಲ. ಹಿಂದಿನ ಕಾನೂನನ್ನೇ ಈಗಲೂ ಬಳಸಿಕೊಳ್ತಾ ಇದ್ದೀವಿ. ಇಂಥವನ್ನೆಲ್ಲಾ ಕಂಟ್ರೋಲ್ ಗೆ ತರುವುದಕ್ಕೋಸ್ಕರವೇ ಕಾನೂನನ್ನು ತರುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.



















