Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯ ಬಳಿಕ ಡಿಕೆ ಸಂಗಡಿಗರ ಸೌಂಡ್ ಕಡಿಮೆ ಆಯ್ತಾ..?

---Advertisement---

ಮೈಸೂರು: ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ. ಗೊಂದಲ ನಿವಾರಣೆಯಲ್ಲಿ ಇವರು ಕೂಡ ಪಾತ್ರ ವಹಿಸ್ತಾರೆ. ಆದ್ರೆ ಈಗ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ. ಸಿಎಂ ಇದ್ದಾರೆ ಅಲ್ವಾ ಎಂಬ ಮಾತನ್ನ ಹೇಳಿದ್ದಾರೆ. ಇದು ಸಿಎಂ ಆಕಾಂಕ್ಷಿಗಳ ಮನಸ್ಸಿಗೆ ದೊಡ್ಡ ಘಾಸಿ ಮಾಡಿದೆ. ಈ ಮಾತಿನಿಂದ ಡಿಕೆ ಸಂಗಡಿಗರ ಧ್ವನಿ ಬದಲಾಯ್ತಾ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಉದಾಹರಣೆಯೂ ಇಲ್ಲಿದೆ.

ಅಧಿಕಾರ ಹಸ್ತಾಂತರದ ಬಗ್ಗೆ ಸಚಿವ ಚಲುವರಾಯಸ್ವಾಮಿ ಅವರು ಮಾತನ್ನಾಡುತ್ತಾ, ಅಧಿಕಾರ ಹಸ್ತಾಂತರ ಮಾಡಬೇಕಿರುವುದು ಹೈಕಮಾಂಡ್ ನಾಯಕರು. ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಚರು ಕೂತು ಮಾತನ್ನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ನಾವೂ ಯಾರೇ ಮಾತನ್ನಾಡಿದರು ಏನು ಆಗಲ್ಲ. ಜನರ ಎದುರಿಗಿರುವ ಸವಾಲುಗಳು ಮುಖ್ಯವೇ ವಿನಃ ಒಳಗಿರುವ ಸಮಸ್ಯೆಗಳಲ್ಲ. ಸಣ್ಣ ಪಕ್ಷ ಜೆಡಿಎಸ್ ನಲ್ಲಿ ಇಲ್ವಾ. ಹಾಗೇ ಕಾಂಗ್ರೆಸ್ ನಲ್ಲೂ ಇದೆ.

ಬಿಜೆಪಿಯಲ್ಲಿ ಅಧಿಕಾರ ಇಲ್ಲದೆ ಇದ್ದಾಗಲೆ ಇಷ್ಟೊಂದು ಆಂತರಿಕ ಕಿತ್ತಾಟವಿದೆ. ನಮ್ಮಲ್ಲಿ ಏನು ಇಲ್ಲ. ಬೆಳಗ್ಗೆ ಆದ್ರೆ ಸಿಎಂ ಹಾಗೂ ಡಿಸಿಎಂ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡ್ತಾರೆ. ಮಾಧ್ಯಮದವರಿಗೂ ಕೆಲವರು ತಪ್ಪು ಮಾಹಿತಿ ಕೊಡ್ತಾ ಇದ್ದಾರೆ. ಅಧ್ಯಕ್ಷರು ನಾಳೆ ಮೀಟಿಂಗ್ ಕರೀತಾರೆ ಅಂದ್ರೆ ದೆಹಲಿಗೆ ಹೋದ ಕೂಡಲೇ ಮೀಟಿಂಗ್ ಮಾಡ್ಬೇಕು. ಅದರ ವಿಚಾರ ಹೈಕಮಾಂಡ್ ಅವರದ್ದು ಎಂಬ ಮಾತನ್ನ ಹೇಳಿದ್ದಾರೆ. ಈ ಮೂಲಕ ಎಲ್ಲರೂ ಸಿಎಂ ಬದಲಾವಣೆ ಬಗ್ಗೆ ಮಾತನ್ನಾಡೋದನ್ನ ನಿಲ್ಲಿಸ್ತಾ ಇದ್ದಾರಾ ಎಂಬ ಪ್ರಶ್ನೆ ಕಾಡೋದಕ್ಕೆ ಶುರುವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now