ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜನವರಿ. 22 : ಕುರಿ ಹಾಗೂ ಮೇಕೆ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಿಕ್ಕ ಉಳ್ಳಾರ್ತಿಯ ಸಣ್ಣ ಬಂಗಾರಯ್ಯ
ಮಲ್ಲೂರ ಹಳ್ಳಿಯ ರವಿಕುಮಾರ್, ರಾಜಣ್ಣ, ನಾಗೇಶ್, ಹಾಗೂ ಚಳ್ಳಕೆರೆ ಗಾಂಧಿನಗರದ ಭಾಷಾ ಎಂದು ಗುರುತಿಸಲಾಗಿದೆ. ಅವರಿಂದ ಸುಮಾರು 6,45,000 ಬೆಲೆಬಾಳುವ 1 ಗೂಡ್ಸ್ ವಾಹನ ಹಾಗೂ ನಗದು ಹಣವನ್ನ ವಶಕ್ಕೆ ಪಡೆದಿದ್ದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮನೆ ಮುಂದೆ ಮೇವಿಗೆಂದು ಕಟ್ಟಿಕೊಂಡಿದ್ದ ಕುರಿ ಹಾಗೂ ಮೇಕೆ ಗಳನ್ನ ಕಳ್ಳರು ಡಿಸೆಂಬರ್ 11/12/2025 ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಚಳ್ಳಕೆರೆ ತಾಲೂಕಿನ ನೆರ್ಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ತಿಕೆಯ್ಯನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ಗ್ರಾಮದ ನಾಗರಾಜ್ ಎನ್ನುವ ರೈತ 50 ಕುರಿಗಳನ್ನ ಸಾಕಾಣಿಕೆ ಮಾಡಿಕೊಂಡು ಜೀವ ಸಾಗಿಸುತ್ತಿದ್ದ. ಇದರಲ್ಲಿ 11 ಟಗರು ಹಾಗೂ ಮೇಕೆ ಓತಗಳನ್ನ ಮನೆಯ ಮುಂದೆ ರಾತ್ರಿ ಮೇವಿಗಾಗಿ ಕಟ್ಟಿಕೊಂಡಿದ್ದ ಕರಿಗಳನ್ನ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಕುರಿ ಮೇಕೆ ಕಳ್ಳತನವಾದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಾಯಕನಹಟ್ಟಿ ಪಿಎಸ್ಐ ಪಾಂಡುರಂಗಪ್ಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಭಂಡಾರ ಇವರ ದರ್ಶನದಲ್ಲಿ ತನಿಖೆ ನಡೆಸಿದ್ದಾರೆ. ತಾಲೂಕಿನ ವ್ಯಾಪ್ತಿಯ ಮೊನ್ನೆ ಕೋಟೆ ಗ್ರಾಮ ಹಾಗೂ ಕಾತ್ರಿಕೆಯ್ಯನಹಟ್ಟಿಯಲ್ಲಿ ಕುರಿ ಮೇಕೆಗಳನ್ನು ಕಳ್ಳತನ ಮಾಡಿದ್ದ.










