ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 31 : ಆನೆಬಾಗಿಲು ಬಳಿ ಪ್ರತಿಷ್ಠಾಪಿಸಲಾಗುವ ಪ್ರಸನ್ನ ಗಣಪತಿಯ 68 ನೇ ವರ್ಷದ ಪೂಜಾ ಮಹೋತ್ಸವ ಅಂಗವಾಗಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಧ್ವಜ ಸ್ತಂಭ ಪೆಂಡಾಲ್ ಪೂಜೆ ನೆರವೇರಿಸಲಾಯಿತು.
ಆ.27 ರಿಂದ ಸೆ.6 ರವರೆಗೆ ಪ್ರತಿಷ್ಟಾಪಿಸಿ ದಿನನಿತ್ಯವೂ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಲಾಗುವುದು.
ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಗೋಪಾಲ್ರಾವ್ ಜಾದವ್, ಉಪಾಧ್ಯಕ್ಷ ನಾಗರಾಜ್ಬೇದ್ರೆ, ಕಾರ್ಯದರ್ಶಿ ನಾರಾಯಣರಾವ್, ವಿದ್ಯಾನಂದ ಎನ್.ವಿ.ರಮೇಶ್, ಜಿ.ಎಂ.ಸಪ್ಲೆಯರ್ಸ್ ಮಾಲೀಕ ರಾಜಣ್ಣ, ಕುಮಾರ್, ಕೃಷ್ಣಾಜಿರಾವ್, ಉದಯ್ಕುಮಾರ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


