Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ತಾತಪ್ಪನನ್ನ ನೀರಿಗೆ ತಳ್ಳೋಕೆ ಕಾರಣ 35 ವರ್ಷದ ದ್ವೇಷ : ಏನಿದು ವೈರಲ್ ವಿಡಿಯೋ ಹಿಂದಿನ ಭಯಾನಕ ಕಥೆ..?

---Advertisement---

ಕಳೆದ ಕೆಲವು ದಿನಗಳಿಂದ ರಾಯಚೂರಿನ ಗಂಡ – ಹೆಂಡತಿ ವಿಡಿಯೋ ವೈರಲ್ ಆಗಿರೋದು ಎಲ್ಲರು ನೋಡಿಯೇ ಇರ್ತೀರಾ. ಗದ್ದೆಮ್ಮ ಹಾಗೂ ತಾತಪ್ಪ ದಂಪತಿಯ ಕಥೆ ಇದು. ಮದುವೆಯಾಗಿ ಕೇವಲ ಮೂರು ತಿಂಗಳಾಗಿದೆ ಅಷ್ಟೇ. ಆದರೆ ಈಗ ಇಬ್ಬರು ಡಿವೋರ್ಸ್ ತನಕ ಹೋಗಿದ್ದಾರೆ. ಗಂಡನ ಮನೆಗೆ ಹೋಗುವಾಗ, ನದಿಯ ಬಳಿ ಫೋಟೋ ತೆಗೆದುಕೊಳ್ಳಲು ಹೋಗಿ, ಗಂಡನನ್ನು ನದಿಗೆ ತಳ್ಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಂಡ ತಾತಪ್ಪ ಕೂಡ ಹೆಂಡತಿ ಗದ್ದೆಮ್ಮನ ಮೇಲೆ ಆರೋಪ ಮಾಡಿದ್ದಾರೆ. ಇದೀಗ ತಾತಪ್ಪ ಮನೆಯವರು ಶಾಕಿಂಗ್ ನ್ಯೂಸ್ ಒಂದನ್ನ ಹೇಳಿದ್ದಾರೆ. ಇದು ನಿನ್ನೆ ಮೊನ್ನೆಯದ್ದಲ್ಲ, 35 ವರ್ಷಗಳ ದ್ವೇಷ ಎಂಬ ವಿಚಾರ ಹೇಳಿದ್ದಾರೆ.

ಒಂದು ಹೆಣ್ಣಿನ ಬಾಳು ಹಾಳು ಮಾಡಬಾರದು ಎಂಬ ಕಾರಣಕ್ಕೆ ಕೇಸ್ ಮಾಡದೆ, ಆಕೆಯ ಮನೆಗೆ ಬಿಟ್ಟು ಬಂದಿದ್ದೀವಿ. ತಾತಪ್ಪನನ್ನು ನದಿಗೆ ತಳ್ಳಿದ ಗದ್ದೆಮ್ಮ, ಬ್ಯಾರೇಜ್ ಮೇಲೆ ನಿಂತು ಚಪ್ಪಲಿ ತೋರಿಸಿದ್ದಳಂತೆ. ಇದು ತಾತಪ್ಪನ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಅದನ್ನು ಕ್ಷಮಿಸಿಬಿಡೋಣಾ. ಆದರೆ ನನ್ನ ಜೀವನ ತೆಗೆಯುವುದಕ್ಕೆ ಹೋಗಿದ್ದು ಎಷ್ಟು ಸರಿ ಎಂದಿದ್ದಾರೆ.

ಗದ್ದೆಮ್ಮನಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ಮೊದಲೇ ಹೇಳದೆ ಮದುವೆಯಾದ ಮೇಲೆ ಹೇಳಿದಕ್ಕೆ, ತಾತಪ್ಪ ಎಲ್ಲರ ಎದುರು ಮದುವೆ ನಡೆದೋಗಿದೆ, ಹೊಂದಿಕೊಂಡು ಬಾಳೋಣಾ ಎಂದು ಸುಮ್ಮನಾಗಿದ್ದನಂತೆ. ಇದೇ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಳೆದ 35 ವರ್ಷದ ಹಿಂದೆ ಗದ್ದೆಮ್ಮ ಹಾಗೂ ತಾತಪ್ಪ ಫ್ಯಾಮಿಲಿಯ ನಡುವೆ ಮಾತುಕತೆ ಇರಲಿಲ್ಲ. ಆದರೆ ಈ ಸಂಬಂಧದಿಂದ ಎಲ್ಲವೂ ಸರಿಯಾಗಲಿ ಎಂದೇ ಎಲ್ಲರೂ ಭಾವಿಸಿ ಮದುವೆ ಮಾಡಿದ್ದರಂತೆ. ಆದರೆ ಈಗ ನೋಡಿದ್ರೆ ಪ್ರಾಣ ತೆಗೆದಯುವುದಕ್ಕೆ ಹೋಗಿದ್ದಾರೆಂದು ತಾತಪ್ಪ ಸಹೋದರ ಆರೋಪ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...