ಸ್ವಂತ ಅಣ್ಣ ಡಿಸಿಎಂ ಆಗೋದನ್ನೇ ಸಹಿಸಿರಲಿಲ್ಲ : ಕುಮಾರಸ್ವಾಮಿ ಬಗ್ಗೆ ಜಮೀರ್ ವಾಗ್ದಾಳಿ..!

suddionenews
1 Min Read

ಬೆಂಗಳೂರು: ಕುಮಾರಸ್ವಾಮಿ‌ ವಿರುದ್ಧ ಜಮೀರ್ ವಾಗ್ದಾಳಿ ಮುಂದುವರೆಸಿದ್ದಾರೆ. ಅಲ್ಪಸಂಖ್ಯಾತರನ್ನ ಸಿಎಂ ಮಾಡಲಿ ನೋಡೋಣಾ ಎಂದಿದ್ದ ಜಮೀರ್ ಇದೀಗ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ತಮ್ಮ ಸ್ವಂತ ಅಣ್ಣ ಡಿಸಿಎಂ ಆಗೋದನ್ನೆ ಸಹಿಸಿರಲಿಲ್ಲ. ಇನ್ನು ಅಲ್ಪಸಂಖ್ಯಾತರನ್ನು ಬೆಳೆಸುತ್ತಾರೆಯೇ ಎಂದಿದ್ದಾರೆ. ಎಚ್ ಡಿ ಕೆ ಒಬ್ಬ ಒಕ್ಕಲಿಗನನ್ನು ಬೆಳೆಸಿಲ್ಲ. ಇನ್ನು ಅಲ್ಪಸಂಖ್ಯಾತರನ್ನು ಬೆಳೆಸುತ್ತಾರೆಯೇ ಎಂದಿದ್ದಾರೆ.

ಕೆಲವು ದಿನಗಳಿಂದ ಕುಮಾರಸ್ವಾಮಿ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಕೇವಲ ವೋಟ್ ಬ್ಯಾಂಕ್ ಗಾಗಿ ಮಾಡ್ತಾ ಇರೋದು. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಗಾಗಿ ಈ ರೀತಿಯಾಗಿ ಮಾತನಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಬೆಳೆಸಲ್ಲ ಎಂದು ಕಿಡಿಕಾರಿದ್ದಾರೆ.

ಎಚ್ಡಿಕೆ ಯಾರನ್ನ ಬೆಳೆಸಿದ್ದಾರೆ..? ಒಬ್ಬ ಒಕ್ಕಲಿಗನನ್ನು ಬೆಳೆಸಿಲ್ಲ. ಸ್ವಂತ ಅಣ್ಣ ಡಿಸಿಎಂ ಆಗೋದನ್ನೇ ಸಹಿಸಲಿಲ್ಲ. ಅಣ್ಣ ಎಲ್ಲಿ ಡಿಸಿಎಂ ಆಗ್ತಾರೋ ಅಂತ ಬಿಜೆಪಿ ಅಧಿಕಾರ ಬಿಟ್ಟು ಕೊಡಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *