ಬೆಂಗಳೂರು; ಕನ್ನಡ ಇಂಡಸ್ಟ್ರಿಗೆ ಹೊಸದೊಂದು ಬ್ಯಾನರ್ ಹುಟ್ಟಿಕೊಂಡಿದೆ. ಅದುವೇ PA ಪ್ರೊಡಕ್ಷನ್. ಪುಷ್ಪ ಅರುಣ್ ಕುಮಾರ್ ಬ್ಯಾನರ್ ಎಂಬುದು. ಈ ಬ್ಯಾನರ್ ಮೂಲಕ ಕೊತ್ತಲವಾಡ ಸಿನಿಮಾವನ್ನ ಮಾಡ್ತಾ ಇದಾರೆ. ಇದಕ್ಕೆ ಪೃಥ್ವಿ ಅಂಬಾರ್ ಹೀರೋ. ಹಿಸಬರಿಗೆ ಅವಕಾಶ ನೀಡುವ ಮೂಲಕ ಒಂದಷ್ಟು ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಇಂದು ಟೀಸರ್ ಲಾಂಚ್ ಆದ್ಮೇಲೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಮಾಧ್ಯಮದವರ ಜೊತೆಗೆ ಒಂದಷ್ಟು ಮಾತುಕತೆ ನಡೆಸಿದರು.
ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುಷ್ಪ ಅವರು, ಯಶ್ ಗಾಗಿ ಸಿನಿಮಾ ಮಾಡಲ್ಲ. ಹೊಸಬರಿಗೆ ಸಿನಿಮಾ ಮಾಡಬೇಕು ಅಂತ ಇರೋದು. ಯಾಕಂದ್ರೆ ಯಶ್ ತುಂಬಾ ಬೆಳೆದಿದ್ದಾರೆ. ನಾವಿನ್ನೂ ಈಗ ಶುರು ಮಾಡಿರೋ ಸಂಸ್ಥೆ ಇದು. ಹಾಗಾಗಿ ಮೊದಲು ನಾವೂ ಏನು ಅಂತ ತೋರಿಸೋಣಾ. ಈ ಮೊದಲೇ ಸಿನಿಮಾ ಪ್ರೊಡಕ್ಷನ್ ಶುರು ಮಾಡಬಹುದಿತ್ತು. ಆದರೆ ಆಗ ನಮ್ಮ ಬಳಿ ಅಷ್ಟೊಂದು ಹಣ ಇರಲಿಲ್ಲ. ಈಗ ಎಲ್ಲಾ ಜದೆ. ಹಾಗಾಗಿ ಸಿನಿಮಾ ನಿರ್ಮಾಣ ಮಾಡ್ತಾ ಇದ್ದೀವಿ. ನಮ್ಮ ಯಜಮಾನರು ಹಾಸನದಲ್ಲಿ ಕೃಷಿ ನೋಡಿಕೊಳ್ತಾರೆ. ಮನೆಯಲ್ಲಿ ಎಲ್ಲರೂ ಸಪೋರ್ಟ್ ಮಾಡ್ತಾರೆ ಎಂದರು.
ಸೊಸೆಗೋಸ್ಕರ ಸಿನಿಮಾ ಮಾಡ್ತೀರಾ ಎಂದಾಗ, ನನ್ನ ಸೊಸೆ ರಾಧಿಕಾ ಓಕೆ ಎಂದರೆ ನಾನು ಸಿನಿಮಾ ಮಾಡುವುದಕ್ಕೆ ರೆಡಿ ಇದ್ದೀನಿ. ನೀವೂ ಅವಳ ಕಾಲ್ ಶೀಟ್ ಕೊಡಿಸಿ ನಾನು ಮಾಡ್ತೀನಿ ಎಂದು ಹೇಳುವ ಮೂಲಕ ಸೊಸೆ ತುಂಬಾ ಬ್ಯುಸಿ ಅಂತಾ ಹೇಳಿದರು. ರಾಧಿಕಾ ಪಂಡಿತ್ ಮದುವೆಯಾಗಿ, ಮಕ್ಕಳಾದ ಮೇಲೆ ಅಪ್ಪಟ ಗೃಹಿಣಿಯಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











