Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾರ್ಚ್-12 ವಿಶ್ವ ಕಿಡ್ನಿ ದಿನಾಚರಣೆ : ಜಾಗೃತಿ ಮತ್ತು ತಡೆಗಟ್ಟುವಿಕೆ ಕುರಿತು ಮುತ್ತುಸ್ವಾಮಿ ಕಣ್ಣನ್ ವಿಶೇಷ ಲೇಖನ

---Advertisement---

 

ವಿಶೇಷ ವರದಿ :
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್,ಚಿತ್ರದುರ್ಗ ಮಾರ್ಚ್. 12.
ಹೃದಯರೋಗ, ನರ ದೌರ್ಬಲ್ಯ, ಕಣ್ಣಿನ ದೃಷ್ಠಿ ದೋಷದ ಕಡೆಗೆ ಎಲ್ಲರೂ ಕಾಳಜಿ ವಹಿಸುವುದು ಸಹಜ. ಆದರೆ ದೇಹದಲ್ಲಿರುವ ವಿಷಕಾರಕ ಪದಾರ್ಥಗಳನ್ನು ಮೂತ್ರದ ಮೂಲಕ ಹೊರ ಹಾಕುವ ಪ್ರಮುಖವಾದ ಅಂಗ ಕಿಡ್ನಿ ಕಡೆ ಯಾರು ಗಮನ ಕೊಡದ ಪರಿಣಾಮ ಸಾವು-ನೋವುಗಳ ಸಂಖ್ಯೆ ದಿನದಿಂದೆ ದಿನೆ ಜಾಸ್ತಿಯಾಗುತ್ತಿರುವುದು ದುರಂತ.

 

ಪ್ರತಿ ವರ್ಷ ಮಾರ್ಚ್ 12 ರಂದು ವಿಶ್ವ ಕಿಡ್ನಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆಯಾದರೂ ಕಿಡ್ನಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ವೈದ್ಯರುಗಳಿಗೂ ಮಾಹಿತಿ ಅಷ್ಟಕ್ಕಷ್ಟೆ. ಕಿಡ್ನಿ ತೊಂದರೆಯಿದೆ ಎನ್ನುವುದನ್ನು ವೈದ್ಯರುಗಳು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಷ್ಟರಲ್ಲಿ ಶೇ.80 ರಷ್ಟು ಕಿಡ್ನಿ ಹಾಳಾಗಿರುತ್ತದೆ. ಆಗ ಅನಿವಾರ್ಯವಾಗಿ ರೋಗಿ ಡಯಾಲಿಸಿಸ್‍ಗೆ ಒಳಗಾಗಬೇಕಾಗುತ್ತದೆ. ಒಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕೆಂದರೆ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಹಾಸಿಗೆ ಮೇಲೆ ಅಂಗಾತ ಮಲಗಿರಬೇಕು.

 

ಅಪ್ಪಿತಪ್ಪಿಯೂ ದೇಹ ಕೊಂಚವೂ ಅಲುಗಾಡುವಂತಿಲ್ಲ. ಒಂದರ್ಥದಲ್ಲಿ ಹೇಳಬೇಕೆಂದರೆ ನರಕಯಾಥನೆ.
ಭಾರತದಲ್ಲಿ ಮೊದಲ ಬಾರಿಗೆ 1964 ರಲ್ಲಿ ಡಯಾಲಿಸಿಸ್ ಆರಂಭಗೊಂಡಿತು. 1971 ರಲ್ಲಿ ಕಿಡ್ನಿ ಕಸಿ ವಿಧಾನ ಕಂಡು ಹಿಡಿಯಲಾಯಿತು. ಪ್ರತಿ ಐದು ಮಂದಿಯಲ್ಲಿ ಒಬ್ಬರಿಗೆ ಕಿಡ್ನಿ ತೊಂದರೆಯಿರುತ್ತದೆ. ಮದ್ಯಪಾನ, ಧೂಮಪಾನ ಸೇವಿಸುವುದಿಲ್ಲ, ಗುಟ್ಕಾ ಅಭ್ಯಾಸವಿಲ್ಲ. ನಮಗೇಕೆ ಕಿಡ್ನಿ ಕೈಕೊಡುತ್ತದೆ ಎನ್ನುವ ತಪ್ಪು ಕಲ್ಪನೆ ಸರಿಯಲ್ಲ. 21 ರಿಂದ 30 ವರ್ಷ ಹಾಗೂ 51 ರಿಂದ 60 ವರ್ಷದ ವಯೋಮಾನದವರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಾಲು ಊತ, ವಾಂತಿ, ಊಟ ಕಂಡಾಕ್ಷಣ ವಾಯಕರಿಕೆ ಬರುವಂತಾಗುವುದು ಕಿಡ್ನಿ ಸಮಸ್ಯೆಯ ಲಕ್ಷಣವಿರಬಹುದು. ಆಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳಿತು.
ಒಂದು ದಿನಕ್ಕೆ 1440 ವಿಷಕಾರಕ ಅಂಶಗಳನ್ನು ದೇಹದಿಂದ ಹೊರ ಹಾಕುವ ಕಿಡ್ನಿ ಮಾನವನ ರಕ್ತವನ್ನು ಶುದ್ದಿಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಕಿಡ್ನಿ ಬಗ್ಗೆ ಯಾರಲ್ಲೂ ಅಸಡ್ಡೆ ಬೇಡ. ಸಮಸ್ಯೆಯಿಂದ ನರಳುವವರು ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಜೋಪಾನವಾಗಿ ಕಾಪಾಡಿಕೊಳ್ಳಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...