ಹೆಣ್ಮಕ್ಳೆ ಸ್ಟ್ರಾಂಗು ಗುರು : ಬಸ್ ಚಲಾಯಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಮಹಿಳೆ..!

ಹೆಣ್ಮಕ್ಳೆ ಸ್ಟ್ರಾಂಗು ಗುರು ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಇದೀಗ ಅದು ಮತ್ತೊಮ್ಮೆ ಪ್ರೂವ್ ಆಗಿದೆ. ಬಸ್ ಚಾಲಕನಿಗೆ ಪಿಡ್ಸ್ ಬಂದು ಬಸ್ ಚಾಲನೆ ಮಾಡಲು ಆಗದೆ ಇದ್ದಾಗ, ಬಸ್ ನಲ್ಲೇ ಇದ್ದ ಮಹಿಳೆಯೇ ಬಸ್ ಚಲಾಯಿಸಿ, ಎಲ್ಲರ ಪ್ರಾಣ ಉಳಿಸಿದ ಘಟನೆ ನಡೆದಿದೆ.

ಈ ಘಟನೆ ಜನವರಿ 7 ರಂದು ನಡೆದಿರುವುದು ಎನ್ನಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಯೋಗಿತಾ ಸತಾವ್ ಎಂಬ ಮಹಿಳೆಯೇ ಈ ಸಾಹಸ ಮಾಡಿರುವುದು.

ಯೋಗಿತಾ ಮತ್ತು ಆಕೆಯ ಕುಟುಂಬಸ್ಥರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ಚಾಲಕನಿಗೆ ಅನಾರೋಗ್ಯ ಎದುರಾಗಿ ಕುಸಿದು ಬಿದ್ದಿದ್ದಾನೆ. ಆಗ ಬಸ್ ನಿಯಂತ್ರಣ ತಪ್ಪಿದೆ. ತಕ್ಷಣ ಎಚ್ಚೆತ್ತ ಯೋಗಿತಾ, ದಿಢೀರನೆ ಬಸ್ ಡ್ರೈವರ್ ನ ಪಕ್ಕಕ್ಕೆ ಸರಿಸಿ, ಆಕೆಯೇ ಬಸ್ ಡ್ರೈವ್ ಮಾಡಿದ್ದಾಳೆ. ಇದರಿಂದಾಗಿ ಸಾಕಷ್ಟು ಜನರ ಪ್ರಾಣ ಉಳಿದಿದೆ.

Share This Article
Leave a Comment

Leave a Reply

Your email address will not be published. Required fields are marked *