ಧರ್ಮಸ್ಥಳದ ತಲೆ ಬುರುಡೆ ಕಥೆ ರಾಜ್ಯದಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಅದರದ್ದೇ ಹಾಟ್ ಟಾಪಿಕ್ ಆಗಿದೆ. ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದನ್ನ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಇದೇ ವೇಳೆ ಧರ್ಮಸ್ಥಳಕ್ಕಾಗಿ ಈಗಾಗಲೇ ಬಿಜೆಪಿ ಯಾತ್ರೆಯನ್ನು ಮಾಡಿದೆ. ಈಗ ಸಮಾವೇಶವನ್ನ ಹಮ್ಮಿಕೊಂಡಿದೆ. ಆದರೆ ಮಿತ್ರ ಪಕ್ಷಗಳು ಇದರಲ್ಲಿ ಪ್ರತ್ಯೇಕವಾದ ಹೋರಾಟ ನಡೆಸುತ್ತಿರುವುದನ್ನು ಜನಸಾಮಾನ್ಯರಿಗೆ ಪ್ರಶ್ನೆಯಾಗಿ ಕಾಡಿದೆ.
ಧರ್ಮಸ್ಥಳಕ್ಕೋಸ್ಕರ ನಾಳೆ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ. ಆದರೆ ನಾಡಿದ್ದು ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಈ ಬಗ್ಗೆ ಮಂಡ್ಯದಲ್ಲಿ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವುದರ ಬಗ್ಗೆ ಅನುಮಾನ ಇದೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರತರಲು ಎನ್ಐಎ ತನಿಖೆ ಅವಶ್ಯಕವಾಗಿದೆ. ಧರ್ಮಸ್ಥಳ ಪಾವಿತ್ರ್ಯತೆಯನ್ನು ಹಾಳು ಮಾಡಲು ಒಳಸಂಚು ರೂಪಿಅಇದ್ದು, ರಾಜ್ಯದ ಜನರಿಗೆ ಎಸ್ಐಟಿ ತನಿಖೆಯ ಮೇಲೆ ನಿರೀಕ್ಷೆಗಳಿಲ್ಲ. ಎನ್ಐಎ ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ. ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದು, ಮುಖಂಡರು, ಕಾರ್ಯಕರ್ತರು ಹಾಸನಕ್ಕೆ ತೆರಳಲಿದ್ದಾರೆ. ಅಲ್ಲಿಗೆ ಹೋದ ಮೇಲೆ ನೇತ್ರಾವತಿಗೆ ತೆರಳಿ, ಸ್ನಾನ ಮಾಡಿದ ಬಳಿಕ ಮಂಜುನಾಥ ಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಅತ್ತ ಬಿಜೆಪಿ ಕೂಡ ಸೆಪ್ಟೆಂಬರ್ 1ರಂದು ಸಮಾವೇಶ ನಡೆಸಲಿದೆ. ಷಡ್ಯಂತ್ರದ ಬಗ್ಗೆ ಎನ್ಐಎ ತನಿಖೆಗೆ ವಹಿಸಬೇಕೆಂದು ಒತ್ತಾಯಿಸುವುದಕ್ಕೆ ಈ ಸಮಾವೇಶ ನಡೆಸುತ್ತಿದೆ. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಹೋರಾಟಗಳೆಲ್ಲಾ ಪ್ರತ್ಯೇಕತೆ ಯಾಕೆ ಎಂಬ ಪ್ತಶ್ನೆ ಜನರನ್ನ ಕಾಡ್ತಿದೆ.











