Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಯಾರೋ ಮಾಡಿದ ತಪ್ಪಿಗೆ ಕರ್ನಾಟಕವನ್ನೇಕೆ ದೂಷಿಸಲಿ..? : ತಮಿಳು ನಟ ಸಿದ್ಧಾರ್ಥ್

---Advertisement---

 

ಚೆನ್ನೈ: ಕರ್ನಾಟಕದಲ್ಲಿ ಕಾವೇರಿಯ ಕಾವು ಹೆಚ್ಚಾಗಿತ್ತು. ಮೊದಲೇ ಮಳೆಯಿಲ್ಲದೆ ರೈತ ಕಂಗಲಾಗಿದ್ದಾನೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರೈತರು, ಕನ್ನಡಪರ ಸಂಘಟನೆಯವರು ಎರಡು ಬಾರಿ ಬಂದ್ ಮಾಡಿದ್ದರು. ಇದೆ ವೇಳೆ ತಮಿಳು ನಟ ಸಿದ್ಧಾರ್ಥ್ ತನ್ನ ಸಿನಿಮಾ ಪ್ರಚಾರಕ್ಕೆಂದು ಬಂದಿದ್ದಾಗಲೂ ಆತನ ಸುದ್ದಿಗೋಷ್ಟಿಯನ್ನೇ ನಿಲ್ಲಿಸಿದ್ದರು. ಇದಕ್ಕೆ ಶಿವಣ್ಣ ಕೂಡ ನಟ ಸಿದ್ಧಾರ್ಥ್ ಅವರಿಗೆ ಕ್ಷಮೆಯಾಚಿಸಿದ್ದರು.

ಇದೀಗ ನಟ ಸಿದ್ಧಾರ್ಥ್ ಮಾತನಾಡಿದ್ದು, ಯಾರೋ ಹತ್ತು ಮಂದಿ ಗೂಂಡಾಗಳು ಮಾಡಿದ ತಪ್ಪಿಗೆ ಕರ್ನಾಟಕವನ್ನೇಕೆ ದೂರಬೇಕು ಎಂದಿದ್ದಾರೆ. ನನ್ನನ್ನು ತಡೆದವರು ಯಾರೋ ಗೂಂಡಾಗಳು. ಕರ್ನಾಟಕ ಬಹಳಷ್ಟು ಪ್ರೀತಿ ಕೊಟ್ಟಿದೆ. ಈ ಸಂಬಂಧ ಈಗಾಗಲೇ ಶಿವರಾಜ್ ಕುಮಾರ್, ಪ್ರಕಾಶ್ ರೈ ಕ್ಷಮೆ ಕೇಳಿದ್ದಾರೆ. ಆದರೆ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ. ಈಗ ಯಾರೋ ಅಟ್ಯಾಕ್ ಮಾಡಿದರೆ ನಾನು ತಮಿಳುನಾಡನ್ನು ದೂಷಿಸುವುದಕ್ಕೆ ಆಗುತ್ತಾ ಎಂದಿದ್ದಾರೆ.

ಅಂದು ಕರ್ನಾಟಕದಲ್ಲಿ ಪ್ರೆಸ್ ಮೀಟ್ ಮಾಡುವಾಗ ಹಲವರು ಆ ಪ್ರೆಸ್ ಮೀಟ್ ಗೆ ನುಗ್ಗಿ, ನಿಲ್ಲಿಸಿದ್ದರು. ಸಿದ್ಧಾರ್ಥ್ ಎಷ್ಟೇ ಹೇಳಿದರೂ ಕೇಳುವುದಕ್ಕೆ ತಯಾರಿರಲಿಲ್ಲ. ತಮಿಳು ನಟ ಎಂಬ ಒಂದೇ ಒಂದು ಕಾರಣಕ್ಕೆ ಈ ರೀತಿಯ ಸಮಸ್ಯೆ ಆಗಿತ್ತು. ಕೊನೆಗೆ ನಟ ಸಿದ್ಧಾರ್ಥ್ ಕೈಮುಗಿದು ಹೊರ ನಡೆದಿದ್ದರು. ಆ ಬಳಿಕ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ನಟ ಸಿದ್ಧಾರ್ಥ್ ಮತ್ತೆ ಕರ್ನಾಟಕದ ಮೇಲಿನ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...