Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ವಿವಿ ತರಿಸಿರುವುದು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ.. ಆರ್ ಎಸ್ ಎಸ್ ಕಚೇರಿಗೆ ಅಲ್ಲ : ಪ್ರಿಯಾಂಕ್ ಖರ್ಗೆ

---Advertisement---

ಕಲಬುರಗಿ: ಕೇಂದ್ರಿಯ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಅವರಿಗೆ ಅವಮಾನ ಆದ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರಿಯ ವಿವಿಗೆ ನಾನು ಆದಷ್ಟು ಬೇಗ ಭೇಟಿ ನೀಡುತ್ತೇನೆ. ವಿಧ್ಯಾಭ್ಯಾಸ ನೀಡುವುದನ್ನು ಬಿಟ್ಟು ವಿವಿ ಬೇರೆಲ್ಲವನ್ನು ಮಾಡುತ್ತಿದೆ. ಕಲಬುರಗಿಗಿಂತ ಸೆಂಟ್ರಲ್ ವಿವಿಯಲ್ಲಿಯೇ ಜಾಸ್ತಿ ರಾಜಕೀಯ ನಡೆಯುತ್ತಿದೆ. ವಿವಿಯವರು ಕೇಂದ್ರಕ್ಕೆ ಮಾತ್ರ ಸಂಬಂಧ ಇದ್ದೀವಿ ಎಂದುಕೊಂಡಿರಬಹುದು. ಆದರೆ ರಾಜ್ಯ ಕೂಡ ಸಾಕಷ್ಟು ಸವಲತ್ತುಗಳನ್ನು ನೀಡಿದೆ.

ಒಂದು ಸಲ ಈಗಾಗಲೇ ಹೇಳಿದ್ದೇನೆ. ಆದರೂ ತಿದ್ದುಕೊಂಡಿಲ್ಲ. ಇನ್ನೊಂದು ಬಾರಿ ಹೇಳುತ್ತೇನೆ. ಅಲ್ಲಿ ಆರ್ ಎಸ್ ಎಸ್ ಕಚೇರಿ ತೆರೆಯುವುದಕ್ಕೆ ಬಿಡುವುದಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಕೇಂದ್ರೀಯ ವಿವಿ ತಂದಿರುವುದು, ಆರ್ ಎಸ್ ಎಸ್ ಕಚೇರಿ ತೆರೆಯುವುದಕ್ಕೆ ಅಲ್ಲ. ಯಾವ್ಯಾವ ಉದ್ದೇಶಗಳಿಗೆ ತೆರೆದಿದ್ದೀವೋ ಅದೇ ಉದ್ದೇಶ ನೆರವೇರಬೇಕು ಎಂದಿದ್ದಾರೆ

ಇನ್ನು ಇದೇ ವೇಳೆ ಚೈತ್ರಾ ಕುಂದಾಪುರದ ಬಗ್ಗೆ ಮಾತನಾಡಿ, ಎಲ್ಲರೂ ಯಾಕೆ ಕುಮಾರ ಕೃಪಾದಿಂದಾನೇ ಆಪರೇಟ್ ಆಗಿರುವುದು..? ಇದೇ ಚೈತ್ರಾ ಕುಂದಾಪುರ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದವರು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...