Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಿನೇ ದಿನೇ ಇಳಿಕೆಯಾಗುತ್ತಿರುವ ಅಡಿಕೆ ಧಾರಣೆಗೆ ಕಾರಣವೇನು..?

Facebook
Twitter
Telegram
WhatsApp

 

ಸುದ್ದಿಒನ್, ದಾವಣಗೆರೆ : ಇತ್ತಿಚೆಗೆ ಅಡಿಕೆ ಬೆಳೆ ಬೆಳದ ರೈತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಅದಕ್ಕೆ ಕಾರಣ ದಿನೇ ದಿನೇ ಅಡಿಕೆ ಬೆಲೆ ಇಳಿಕೆಯಾಗುತ್ತಿರುವುದು. ಪ್ರತಿ ಕ್ವಿಂಟಾಲ್ ಗೆ 2,300 ರೂಪಾಯಿ ಇಳಿಕೆಯಾಗಿರುವುದು ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಈ ಬಾರಿ ಮೊದಲೇ ಮಳೆಯಿಲ್ಲದೆ ಬರಗಾಲದಿಂದ ಭೂಮಿ ಬಿಸಿಯಾಗಿದೆ. ಬೋರ್ ವೆಲ್ ನಲ್ಲಿ ನೀರು ಬರುವುದೇ ಕಷ್ಟ ಸಾಧ್ಯವಾಗಿದೆ. ಹೀಗಿರುವಾಗಲೂ ದಾವಣಗೆರೆಯಲ್ಲಿ ರೈತರು ಅಡಿಕೆ ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ. ಇದರ ನಡುವೆ ಅಡಿಕೆ ಧಾರಣೆ ಕುಸಿತವಾದರೆ ರೈತರ ಸ್ಥಿತಿ ಏನಾಗಬಹುದು..?

ಅಡಿಕೆ ಧಾರಣೆ ಕುಸಿತವಾಗಲು ಪ್ರಮುಖವಾದ ಒಂದು ಕಾರಣವೂ ಇದೆ. ಅಕ್ರಮವಾಗಿ ಅಡಿಕೆಯನ್ನು ರಪ್ತು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ದಾವಣಗೆರೆಯಲ್ಲೂ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅದು ಅಡಿಕೆ ಬೆಳೆಯೇ ಆಗಿದೆ. ಚನ್ನಗಿರಿ ಭಾಗದಲ್ಲೂ ಯಥೇಚ್ಛವಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ 57,000 ರೂಪಾಯಿ ಪ್ರತಿ ಕ್ವಿಂಟಾಲ್ ಗೆ ಅಡಿಕೆ ವಹಿವಾಟು ನಡೆದಿತ್ತು. ಆದರೆ ಈ ವರ್ಷ 47,000 ಆಸುಪಾಸಿನಲ್ಲಿದೆ. ಅಂದ್ರೆ ಹತ್ತು ಸಾವಿರ ಕಡಿಮೆಯಾಗಿದೆ. ಒಂದು ಕ್ವಿಂಟಾಲ್ ಗೆ ಹತ್ತು ಸಾವಿರ ಕಡಿಮೆಯಾದರೆ ರೈತನಿಗೆ ತಲೆನೋವಾಗದೆ ಇರುತ್ತದೆಯೇ.

ಉತ್ತರ ಭಾರತದ ಹಲವೆಡೆಯಲ್ಲಿ ಬಯಲುಸೀಮೆ, ಮಲೆನಾಡು ಹಾಗೂ ಮಧ್ಯಕರ್ನಾಟಕ, ಕರಾವಳಿ ಭಾಗದ ಅಡಿಕೆಗೆ ಭಾರೀ ಡಿಮ್ಯಾಂಡ್ ಇದೆ. ಈ ಬೇಡಿಕೆಗೆ ಅನುಗುಣವಾಗಿ ಕರಾವಳಿ ಜನ ಅಡಿಕೆ ಬೆಳೆಯುತ್ತಾರೆ. ಆದರೆ ಕರಾವಳಿ ಮಾರುಕಟ್ಟೆಗೆ ವಿದೇಶದಿಂದ ಅಡಿಕೆ ಆಗಮಿಸುತ್ತಿರುವುದರಿಂದ ಅಡಿಕೆ ಬೆಲೆಯಲ್ಲಿ ಕುಸಿತವಾಗುತ್ತಿದೆ ಎಂದು ಚರ್ಚೆಗಳು ನಡೆಯುತ್ತಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!