Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಿನೇ ದಿನೇ ಇಳಿಕೆಯಾಗುತ್ತಿರುವ ಅಡಿಕೆ ಧಾರಣೆಗೆ ಕಾರಣವೇನು..?

---Advertisement---

 

ಸುದ್ದಿಒನ್, ದಾವಣಗೆರೆ : ಇತ್ತಿಚೆಗೆ ಅಡಿಕೆ ಬೆಳೆ ಬೆಳದ ರೈತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಅದಕ್ಕೆ ಕಾರಣ ದಿನೇ ದಿನೇ ಅಡಿಕೆ ಬೆಲೆ ಇಳಿಕೆಯಾಗುತ್ತಿರುವುದು. ಪ್ರತಿ ಕ್ವಿಂಟಾಲ್ ಗೆ 2,300 ರೂಪಾಯಿ ಇಳಿಕೆಯಾಗಿರುವುದು ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಈ ಬಾರಿ ಮೊದಲೇ ಮಳೆಯಿಲ್ಲದೆ ಬರಗಾಲದಿಂದ ಭೂಮಿ ಬಿಸಿಯಾಗಿದೆ. ಬೋರ್ ವೆಲ್ ನಲ್ಲಿ ನೀರು ಬರುವುದೇ ಕಷ್ಟ ಸಾಧ್ಯವಾಗಿದೆ. ಹೀಗಿರುವಾಗಲೂ ದಾವಣಗೆರೆಯಲ್ಲಿ ರೈತರು ಅಡಿಕೆ ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ. ಇದರ ನಡುವೆ ಅಡಿಕೆ ಧಾರಣೆ ಕುಸಿತವಾದರೆ ರೈತರ ಸ್ಥಿತಿ ಏನಾಗಬಹುದು..?

ಅಡಿಕೆ ಧಾರಣೆ ಕುಸಿತವಾಗಲು ಪ್ರಮುಖವಾದ ಒಂದು ಕಾರಣವೂ ಇದೆ. ಅಕ್ರಮವಾಗಿ ಅಡಿಕೆಯನ್ನು ರಪ್ತು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ದಾವಣಗೆರೆಯಲ್ಲೂ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅದು ಅಡಿಕೆ ಬೆಳೆಯೇ ಆಗಿದೆ. ಚನ್ನಗಿರಿ ಭಾಗದಲ್ಲೂ ಯಥೇಚ್ಛವಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ 57,000 ರೂಪಾಯಿ ಪ್ರತಿ ಕ್ವಿಂಟಾಲ್ ಗೆ ಅಡಿಕೆ ವಹಿವಾಟು ನಡೆದಿತ್ತು. ಆದರೆ ಈ ವರ್ಷ 47,000 ಆಸುಪಾಸಿನಲ್ಲಿದೆ. ಅಂದ್ರೆ ಹತ್ತು ಸಾವಿರ ಕಡಿಮೆಯಾಗಿದೆ. ಒಂದು ಕ್ವಿಂಟಾಲ್ ಗೆ ಹತ್ತು ಸಾವಿರ ಕಡಿಮೆಯಾದರೆ ರೈತನಿಗೆ ತಲೆನೋವಾಗದೆ ಇರುತ್ತದೆಯೇ.

ಉತ್ತರ ಭಾರತದ ಹಲವೆಡೆಯಲ್ಲಿ ಬಯಲುಸೀಮೆ, ಮಲೆನಾಡು ಹಾಗೂ ಮಧ್ಯಕರ್ನಾಟಕ, ಕರಾವಳಿ ಭಾಗದ ಅಡಿಕೆಗೆ ಭಾರೀ ಡಿಮ್ಯಾಂಡ್ ಇದೆ. ಈ ಬೇಡಿಕೆಗೆ ಅನುಗುಣವಾಗಿ ಕರಾವಳಿ ಜನ ಅಡಿಕೆ ಬೆಳೆಯುತ್ತಾರೆ. ಆದರೆ ಕರಾವಳಿ ಮಾರುಕಟ್ಟೆಗೆ ವಿದೇಶದಿಂದ ಅಡಿಕೆ ಆಗಮಿಸುತ್ತಿರುವುದರಿಂದ ಅಡಿಕೆ ಬೆಲೆಯಲ್ಲಿ ಕುಸಿತವಾಗುತ್ತಿದೆ ಎಂದು ಚರ್ಚೆಗಳು ನಡೆಯುತ್ತಿವೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment