Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ಬಗ್ಗೆ ಅನಂತ್ ಕುಮಾರ್ ಹೆಗಡೆ ಆಡಿದ ಮಾತಿಗೆ ವಿ ಸೋಮಣ್ಣ ಏನಂದ್ರು..?

---Advertisement---

ಬೆಂಗಳೂರು: ಅಯೋಧ್ಯೆ142 ಕೋಟಿ ಭಾರತೀಯರದ್ದಲ್ಲ. ವಿಶ್ವದ ಭೂಪಟದಲ್ಲಿ, ಇಂಥ ದೊಡ್ಡ ಸಮಸ್ಯೆಯನ್ನು, ಈ ದೇಶದ ಇತಿಹಾಸವನ್ನು, ಈ ದೇಶದ ಸಂಸ್ಕೃತಿಯನ್ನು, ಈ ದೇಶದ ನೆಲೆಯಲ್ಲಿ, ಶ್ರೀರಾಮಚಂದ್ರನ ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸುವಂತ ಜಾಗದಲ್ಲಿ ಮಾಡುತ್ತಾ ಇದ್ದಾರೆ. ನಾನು, ಇನ್ನೊಬ್ಬರು ಹೋಗಬೇಕೆಂಬ ವಿಚಾರಕ್ಕಿಂತ ಹೆಚ್ಚಾಗಿ, ಎಲ್ಲಾ ಭಾರತೀಯರಿಗೂ ಸಲ್ಲುತ್ತದೆ. ಶ್ರೀರಾಮಚಂದ್ರ ಒಬ್ಬ ದೇವರು. ನಂಬಿಕೆ ಎಂಬುದನ್ನು ಇಟ್ಟುಕೊಂಡು ಮಾಡಿದ್ದಕ್ಕೇನೆ ಪ್ರಧಾನಿ ಮೋದಿಯವರು ಯಶಸ್ಸು ಕಂಡಿದ್ದಾರೆ ಎಂದಿದ್ದಾರೆ.

 

ಇದೆ ವೇಳೆ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ದೆಹಲಿಗೆ ಹೋಗಿದ್ದೆ. ನಾಯಕರನ್ನು ಭೇಟಿ ಮಾಡುವುದರ ಜೊತೆಗೆ ದೇವಸ್ತಾನಗಳಿಗೂ ಓಡಾಡಿಕೊಂಡು ಬಂದಿದ್ದೀನಿ. ಸಾಮಾನ್ಯ ಜನರ ಬಗ್ಗೆ ಕಾಳಜಿ ಇಟ್ಟುಕೊಂಡು, ಬಡವರು ಬಡವರಾಗಿಯೇ ಉಳಿಯಬಾರದು ಎಂಬ ಒಳ್ಳೆಯ ಭಾವನೆ ಇಟ್ಟುಕೊಂಡು ಕೆಲಸ ಮಾಡಿದರೆ, ಒಳ್ಳೆಯದ್ದೆ ಆಗುತ್ತೆ ಎಂಬಂತೆ ಈ ಸಲದ ದೆಹಲಿಯ ಯಾತ್ರೆ ನನಗೆ ದೊಡ್ಡ ಅನುಭವವನ್ನೇ ಕೊಟ್ಟರು‌. ಜೆಪಿ ನಡ್ಡಾ ಅವರು, ಸಂತೋಷ್ ಜೀ ಅವರು, ಅಮಿತ್ ಶಾ ಜೀ ಅವರು ಸಿಕ್ಕಿದ್ರು. ಅವರು ಕೊಟ್ಟಂತ ಸಲಹೆ ಸೂಚನೆ, ಅವರ ನಡವಳಿಕೆ, ಅವರ ಅಂತರಾಳದ ಮಾತುಗಳನ್ನು ಕೇಳಿದಾಗ ಒಬ್ಬ ರಾಜಕಾರಣಿ ಆದವರು, ದೊಡ್ಡವರ ಮಾತು ಕೇಳಿದಾಗ ಆಗುವ ತೊಂದರೆಗೆ ಎಲ್ಲೋ ಒಂದು ಕಡೆ ಯಾವ ರೀತಿ ನೋವು ಕೊಡುತ್ತದೆ ಎಂಬುದು ಇದರಿಂದ ಅರ್ಥವಾಗಿದೆ. ರಾಷ್ಟ್ರಕ್ಕೆ ಮೋದಿಯವರ ಅಗತ್ಯವಿದೆ ಎಂದಿದ್ದಾರೆ.

 

ಅನಂತ್ ಕುಮಾರ್ ಹೆಗಡೆ ಅವರ ಸ್ಟೇಟ್ಮಂಟ್ ಕೂಡ ಗಮನಿಸಿದ್ದೀನಿ. ಅವರು ಒಬ್ಬ ಹಿರಿಯ ನಾಯಕ. ನಾನು ಅವರ ನಿಶ್ಕಲ್ಮಶ ಭಾವನೆಯನ್ನು ನೋಡಿದ್ದೀನಿ. ಏನು ಬಾಯಿಗೆ ಬರುತ್ತೆ, ಅದನ್ನೇ ಹೇಳುತ್ತಾರೆ ನನ್ನ ಥರ. ಹಿಂದೆ ಮುಂದೆ ನೋಡಲ್ಲ. ಆದರೆ ಅವರು ಸಿದ್ದರಾಮಯ್ಯ ಅಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಸಿದ್ದರಾಮಯ್ಯ ಅವರು ಎಷ್ಟರಮಟ್ಟಿಗೆ ಮಾತನಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಅನಂತ್ ಕುಮಾರ್ ಹೆಗಡೆ ಅವರು ಸುಸಂಸ್ಕೃತ ಕುಟುಂಬದಿಂದ ಬಂದವರು. ನಮ್ಮ ಭಾಷೆಯನ್ನು ನಾವೇ ಹಿಡಿತದಲ್ಲಿ ಇಡದೆ ಹೋದರೆ, ನಂಗೆ ವೈಯಕ್ತಿಕವಾಗಿ ಇಷ್ಟವಾಗಲಿಲ್ಲ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment