‘ಈ ‌ನನ್ ಮಗನನ್ನ ಸೋಲಿಸಬೇಕು ಅಂತ ಬಿಜೆಪಿಯವರೇ ಪ್ಲ್ಯಾನ್ ಮಾಡಿದ್ದಾರೆ’ : ಡಿಕೆಶಿ ಭೇಟಿ ಬಗ್ಗೆ ಸೋಮಶೇಖರ್ ಹೇಳಿದ್ದೇನು..?

1 Min Read

 

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಮರಳಿ ಗೂಡಿಗೆ ಅನ್ನೋ ವಿಚಾರ ಸಾಕಷ್ಟು ಸದ್ದು ಮಾಡ್ತಾ ಇದೆ. ಕಾಂಗ್ರೆದ್ ಬಿಟ್ಟು ಬಿಜೆಪಿಗೆ ಹೋದವರು ಮತ್ತೆ ಕಾಂಗ್ರೆಸ್ ಗೆ ವಾಪಾಸ್ ಆಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ವಿಚಾರಕ್ಕೆ‌ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತಾಡಿದ್ದಾರೆ. ಬಿಜೆಪಿಯವರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

ಈ ನನ್ ಮಗನನ್ನು ಸೋಲಿಸಬೇಕು ಅಂತ ಬಿಜೆಪಿಯವರೇ ಆಡಿಯೋ ಮಾಡಿದ್ದಾರೆ. ಇದನ್ನೆಲ್ಲಾ ನೋಡ್ತಾ ಇದ್ರೆ ಬಿಜೆಪಿಯವರೇ ನನ್ನನ್ನ ಕಾಂಗ್ರೆಸ್ ಗೆ ಕಳುಹಿಸುತ್ತಾರೇನೋ. ಡಿಕೆ ಶಿವಕುಮಾರ್ ಅವರು ಇತ್ತಿಚೆಗೆ ನನ್ನ ಕ್ಷೇತ್ರಕ್ಕೆ ಬಂದಿದ್ರು. ಆದ್ರೆ ಅವರು ಬರ್ತಾ ಇರೋದನ್ನ ಅಧಿಕಾರಿಗಳು ಕೂಡ ಹೇಳಿರಲಿಲ್ಲ. ಬಂದಾದ ಮೇಲೆ ಅವರನ್ನು ಚೆನ್ನಾಗಿ ಮಾತಾಡಿಸಿದೆ. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದ್ದೆ.

ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಹೀಗಾಗಿ ಅವರ ಬಳಿ ಹೇಳಿದಾಗ, ಅವರು ಅಧಿಕಾರಿಗಳಿಗೆ ತಿಳಿಸಿ ಸರಿ ಮಾಡಲು ಸೂಚಿಸಿದ್ದಾರೆ. ಈ ವೇಳೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನ ಆಡಿದ್ದೇನೆ. ಅದನ್ನ ಬಿಟ್ಟರೆ ಅವರ ಜೊತೆಗೆ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ಈ ನನ್ ಮಗನನ್ನ ಸೋಲಿಸಬೇಕು ಅಂತಾ ಸ್ಥಳೀಯ ಬಿಜೆಪಿವ್ರು ಆಡಿಯೋ ಮಾಡಿದ್ದಾರೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಬಿಜೆಪಿ ಬಿಟ್ ಹೋಗಲ್ಲ. ಇದರಲ್ಲಿ ಅನುಮಾನ ಇಲ್ಲ. ನಾನು ಪಕ್ಷ ಬಿಡ್ತೀನಿ ಅಂತಾ ಹೇಳಿಲ್ಲ. ರಾಜ್ಯ ಮಟ್ಟದ ಬಿಜೆಪಿ ನಾಯಕರಲ್ಲಿ ನನಗೆ ಗೌರವ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *